ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳವಾರ ಬಾಬ್ರಿ ಮಸೀದಿ ವಿಚಾರಣೆ

By Mrutyunjaya Kalmat
|
Google Oneindia Kannada News

Ayodhya Ram-Janmabhoomi-Babri masjid
ನವದೆಹಲಿ, ಸೆ. 26 : ರಾಮಜನ್ಮಭೂಮಿ-ಬಾಬ್ರಿ ಮಸೀದಿ ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಕೋರ್ಟಿನ ತೀರ್ಪನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿರುವ ವಿಶೇಷ ಮೇಲ್ಮನವಿಯ ಭವಿಷ್ಯವನ್ನು ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿ ಎಸ್ ಎಚ್ ಕಪಾಡಿಯಾ ನೇತೃತ್ವದ ತ್ರಿಸದಸ್ಯ ಪೀಠ ಮಂಗಳವಾರ ನಿರ್ಧರಿಸಲಿದೆ.

ಅರ್ಜಿಯ ವಿಚಾರಣೆಯನ್ನು ಕಲಾಪಸೂಚಿಯ ಪ್ರಥಮ ವಿಷಯವಾಗಿ ಬೆಳಗ್ಗೆ 10.30ಕ್ಕೆ ನಿಗದಿಪಡಿಸಲಾಗಿದೆ. ನ್ಯಾ. ಅಫ್ತಾಬ್ ಅಲಮ್ ಮತ್ತು ನ್ಯಾ.ಕೆ ಎಸ್ ರಾಧಾಕೃಷ್ಣ ತ್ರಿಸದಸ್ಯ ಪೀಠದಲ್ಲಿದ್ದಾರೆ. ಕೋರ್ಟಿನ ಹೊರಗೆ ಪರಿಹಾರವೊಂದನ್ನು ಪರಿಶೀಲಿಸುವ ಸಲುವಾಗಿ ತೀರ್ಪನ್ನು ಮುಂದೂಡುವಂತೆ ಕೋರಿ ನಿವೃತ್ತ ಅಧಿಕಾರಿ ರಮೇಶ್ ಚಂದ್ರ ತ್ರಿಪಾಠಿ ಎಂಬುವವರು ಸಲ್ಲಿಸಿದ ಅರ್ಜಿ ಮೇಲೆ ಸುಪ್ರಿಂಕೋರ್ಟ್ ಗುರುವಾರ ಹೈಕೋರ್ಟಿನ ತೀರ್ಪಿಗೆ ಒಂದು ವಾರ ತಡೆಯಾಜ್ಞೆ ನೀಡಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X