ಬೆಂಗಳೂರಿಗೆ ಅಡಿಯಿಟ್ಟಿದೆ 'ಮದ್ರಾಸ್ ಐ' ಎಚ್ಚರ!

Conjunctivitis cases rise in Bangalore
ಬೆಂಗಳೂರು, ಸೆ.14: ಬೆಂಗಳೂರಿಗೆ 'ಮದ್ರಾಸ್ ಐ' ಮಾರಿ ಅಡಿಯಿಟ್ಟಿದ್ದು ಅನೇಕ ಕಣ್ಣಾಸ್ಪತ್ರೆಗಳಲ್ಲಿ ರೋಗದ ಪ್ರಕರಣಗಳು ಪತ್ತೆಯಾಗಿವೆ. ಎಚ್1ಎನ್1 ಮತ್ತು ಡೆಂಗೆ ಭೀತಿಯಿಂದ ಕಂಗಾಲಾಗಿದ್ದ ಜನತೆ ಈಗ 'ಮದ್ರಾಸ್ ಐ' ಭೀತಿಯಲ್ಲಿದ್ದಾರೆ.

ಕಳೆದ ಐದು ದಿನಗಳಿಂದ ನಗರದ ಶಂಕರ್ ನೇತ್ರಾಲಯ ಚಿಕಿತ್ಸಾಲಯದಲ್ಲಿ 350 ಹೆಚ್ಚು ಪ್ರಕರಣಗಳು ದಾಖಲಾಗಿವೆ. ದಿನದಿಂದ ದಿನಕ್ಕೆ ಮದ್ರಾಸ್ ಐ ಪ್ರಕರಣಗಳು ಹೆಚ್ಚುತ್ತಲೆ ಇವೆ ಎಂದು ಶಂಕರ ನೇತ್ರಾಲಯ ವೈದ್ಯರು ತಿಳಿಸಿದ್ದಾರೆ. ವೈರಾಣು ಮತ್ತು ಬ್ಯಾಕ್ಟೀರಿಯಾದಿಂದ ಮದ್ರಾಸ್ ಐ ಹರಡುತ್ತದೆ.

ಸಾಮಾನ್ಯವಾಗಿ ಈ ರೋಗ ಮೇ ಅಥವಾ ಜೂನ್ ತಿಂಗಳಲ್ಲಿ ಹರಡುತ್ತದೆ. ಪುಷ್ಪದ ಪರಾಗ ರೇಣು ಗಾಳಿಯಲ್ಲಿ ಹಾರಾಡುವುದರಿಂದ ಕಣ್ಣು ಬೇಗ ರೋಗಕ್ಕೆ ತುತ್ತಾಗುತ್ತದೆ ಎನ್ನುತ್ತಾರೆ ವೈದ್ಯರು. ನಗರದ ಮೋದಿ ಆಸ್ಪತ್ರೆಯಲ್ಲೂ ಮದ್ರಾಸ್ ಐ ಪ್ರಕರಣಗಳು ದಿನವೊಂದಕ್ಕೆ 50 ರಿಂದ 60 ದಾಖಲಾಗುತ್ತಿವೆ.

ಮಿಂಟೋ ಕಣ್ಣಾಸ್ಪತ್ರೆಯಲ್ಲೂ ಪರಿಸ್ಥಿತಿ ಉಳಿದ ಆಸ್ಪತ್ರೆಗಳಿಗಿಂತ ಭಿನ್ನವಾಗಿಲ್ಲ. ಕಣ್ಣಿನಲ್ಲಿ ತೀವ್ರ ಉರಿ, ಕಣ್ಣು ಚುಚ್ಚಿದ ಅನುಭವ ಮದ್ರಾಸ್ ಐ ಲಕ್ಷಣಗಳು. ಅಕ್ಷಿಪಟಲಕ್ಕೆ ಸೋಂಕು ತಗುಲಿದರೆ ಗುಣಮುಖವಾಗಲು 6 ರಿಂದ 8 ತಿಂಗಳು ಬೇಕು. ಕೈಗಳನ್ನು ಆಗಾಗ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ. ಕೈ ಕುಲುಕುವುದನ್ನು ತಪ್ಪಿಸಿ. ಇತರರ ಕರವಸ್ತ್ರ ಬಳಸದಿರಿ. ತೊಂದರೆ ಕಾಣಿಸಿಕೊಂಡರೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+