ಎಲ್ಲ ಮ್ಯಾಚ್ ಫಿಕ್ಸಿಂಗ್ ಸೂತ್ರದಾರ ದಾವೂದ್!

ಕರಾಚಿಯಲ್ಲಿ ಉದ್ಯಮ ನಡೆಸುತ್ತಿರುವ ದಾವೂದ್ ಅನೇಕ ವರ್ಷಗಳ ಹಿಂದಿನಿಂದಲೂ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿರುವುದು ಗೊತ್ತಿರುವ ಸಂಗತಿ. ಇದೀಗ ಸ್ಪಾಟ್ ಫಿಕ್ಸಿಂಗ್ ನಲ್ಲಿ ಸಿಕ್ಕಿಬಿದ್ದಿರುವ ಮಝರ್ ಮಜೀದ್ ಬರೀ ನೆಪ ಮಾತ್ರ. ಕ್ರಿಕೆಟಿನ ದೊಡ್ಡ ಜಾಲವೊಂದು ಪಾಕಿಸ್ತಾನದಲ್ಲಿದೆ. ಅದಕ್ಕೆ ಮುಖ್ಯಸ್ಥ ಈ ದಾವೂದ್ ಇಬ್ರಾಹಿಂ ಎಂದು ಬುಕ್ಕಿ ನೋಮಿ ಖಾನ್ ಮೀರರ್ ಪತ್ರಿಕೆ ಹೇಳಿಕೆ ನೀಡಿದ್ದಾನೆ.
ಫಿಕ್ಸಿಂಗ್ ಜಾಲ ಭಾರತದಲ್ಲಿಯೂ ಹರಡಿಕೊಂಡಿದೆ. ದಾವೂದ್ ಕರಾಚಿಯಲ್ಲಿ ಕುಳಿತುಕೊಂಡು ಇದನ್ನು ನಡೆಸುತ್ತಾನೆ. ಇದರಿಂದ ಕೋಟ್ಯಂತರ ರುಪಾಯಿಗಳನ್ನು ಗಳಿಸುತ್ತಿದ್ದಾನೆ. ನಾನು ಈ ದಂಧೆಗೆ ಇಳಿದು 5 ವರ್ಷವಾಗಿದ್ದು, ವರ್ಷಕ್ಕೆ ಸರಾಸರಿ 2.70 ಲಕ್ಷ ಪೌಂಡ್ ಹಣವನ್ನು ಗಳಿಸುತ್ತಿದ್ದೇನೆ ಎಂದು ನೋಮಿ ಖಾನ್ ಹೇಳಿಕೊಂಡಿದ್ದಾನೆ.
ಫಿಕ್ಸಿಂಗ್ ಅಕ್ರಮ ದಂಧೆ ಎಂದು ಗೊತ್ತಿದ್ದರೂ ಸುಲಭವಾಗಿ ಮತ್ತು ಅತೀ ವೇಗವಾಗಿ ಹಣ ಸಂಪಾದನೆ ಮಾಡಬಹುದು. ಬೆಟ್ಟಿಂಗ್ ದಂಧೆ ನಡೆಸಲು ಬೇರೆ ಕಚೇರಿಯನ್ನೇ ಆರಂಭಿಸಿದ್ದು, ಪಾಕಿಸ್ತಾನ ಮತ್ತು ಭಾರತದಲ್ಲಿರುವ ಸಣ್ಣಪುಟ್ಟ ಬುಕ್ಕಿಗಳು ನಮ್ಮ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಾರೆ. ನನ್ನ ಕಚೇರಿಯಲ್ಲಿ ಏಳು ಜನರಿದ್ದು, ದೂರವಾಣಿ ಮೂಲಕ ಆಟಗಾರ ಮತ್ತು ಸಂಬಂಧಿಸಿದವರನ್ನು ಸಂಪರ್ಕ ಮಾಡುತ್ತಿರುತ್ತೇವೆ ಎಂದು ನೋಮಿ ಖಾನ್ ವಿವರಿಸಿದ್ದಾನೆ.
ಫುಟ್ಬಾಲ್ ಗಿಂತ ಕ್ರಿಕೆಟ್ ನಲ್ಲಿ ಹೆಚ್ಚು ಬೆಟ್ಟಿಂಗ್ ನಡೆಯುತ್ತದೆ. ಅಲ್ಲದೇ ಕ್ರಿಕೆಟ್ ನಲ್ಲಿ ಬೆಟ್ಟಿಂಗ್ ನಡೆಸಲು ಅನೇಕ ದಾರಿಗಳೂ ಇವೆ. ಪಾಕಿಸ್ತಾನದಲ್ಲಂತೂ ಬೆಟ್ಟಿಂಗ್ ಮನೆಮಾತಾಗಿರುವ ಸಂಗತಿ. ಅಲ್ಲಿರುವಷ್ಟು ಬೆಟ್ಟಿಂಗಭೂತ ಬೇರೆ ಯಾವ ದೇಶದಲ್ಲೂ ಕಾಣುವುದು ಅಸಾಧ್ಯ ಎಂದು ಬುಕ್ಕಿ ಹೇಳಿದ್ದಾನೆಂದು ಮಿರರ್ ಪತ್ರಿಕೆ ವರದಿ ಮಾಡಿದೆ. ಫಿಕ್ಸಿಂಗ್ ಬಾಸ್ ದಾವೂದ್ ಗೆ ಹಣ ನೀಡಬೇಕು ಎಂದು ಖಾನ್ ಸ್ಪಷ್ಟಪಡಿಸಿದ್ದಾನೆ.
ಕ್ರಿಕೆಟ್ ಕಾಶಿ ಎಂದೇ ಪರಿಗಣಿಸಲ್ಪಟ್ಟಿರುವ ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ಸ್ಪಾಟ್ ಫಿಕ್ಸಿಂಗ್ ಹಗರಣ ಬೆಳಕಿಗೆ ಬಂದಿತ್ತು. ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಭಟ್, ವೇಗಿಗಳಾದ ಮೊಹ್ಮದ್ ಆಸಿಫ್ ಮತ್ತು ಮೊಹ್ಮದ್ ಅಮೀರ್ ಅವರುಗಳು ಸ್ಪಾಟ್ ಫಿಕ್ಸಿಂಗ್ ನಲ್ಲಿ ಹಣ ಪಡೆದಿದ್ದರಿಂದ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಮಾನತು ಮಾಡಿದ್ದು, ತನಿಖೆ ಆರಂಭಿಸಿದೆ.
ಭಾರತೀಯ ಮೂಲದ ಉಗ್ರ ದಾವೂದ್ ಇಬ್ರಾಹಿಂ 1992ರ ಮುಂಬೈ ಸ್ಫೋಟ ಸೇರಿದಂತೆ ಭಾರತದಲ್ಲಿ ನಡೆದಿರುವ ಅನೇಕ ವಿಧ್ವಂಸಕ ಕೃತ್ಯಗಳಿಗೆ ಈತನೇ ಮಾಸ್ಟರ್ ಮೈಂಡ್. ಪಾಕ್ ಕ್ರಿಕೆಟಿಗ ಜಾವೇದ್ ಮಿಯಂದಾದ್ ಅವರ ಮಗ ಜುನೇದ್ ಮಿಯಂದಾದ್ ದಾವೂದ್ ಮಗಳು ಮುಕ್ರಾನಳನ್ನು ಮದುವೆಯಾಗಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications