ಕ್ರಿಕೆಟ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ಎಂದರೇನು ?

ಸ್ಪಾಟ್ ಫಿಕ್ಸಿಂಗ್ ಏನು ಎಂದು ತಿಳಿದುಕೊಳ್ಳುವ ಮುನ್ನ ಸ್ಪಾಟ್ ಬೆಟ್ಟಿಂಗ್ ಏನು ಎಂದು ತಿಳಿದುಕೊಳ್ಳಬೇಕಾದ್ದು ಅವಶ್ಯ. ಕ್ರಿಕೆಟ್ನಲ್ಲಿನ ಬೆಟ್ಟಿಂಗ್ ಈಗ ಕೇವಲ ಫಲಿತಾಂಶದ ಮೇಲಷ್ಟೇ ನಡೆಯುವುದಲ್ಲ. ಟಾಸ್ ಗೆಲ್ಲುವುದರಿಂದ ಹಿಡಿದು ಆಟಗಾರರ ಮತ್ತು ಬೌಲರುಗಳ ನಿರ್ವಹಣೆಯ ಮೇಲೆ ಪ್ರತಿಯೊಂದು ಓವರಿನ ಆಧಾರದಲ್ಲೂ ಬೆಟ್ಟಿಂಗ್ ನಡೆಯುತ್ತದೆ.
ಪ್ರತಿ ಓವರಿನಲ್ಲಿ ಎಷ್ಟು ರನ್ ಹೋಗುತ್ತದೆ, ಮೇಡನ್ ಆಗುತ್ತದೋ ಇಲ್ಲವೋ, ವಿಕೆಟ್ ಬೀಳುತ್ತದೋ ಇಲ್ಲವೋ ಎಂದು ಕೂಡ ಬೆಟ್ ಕಟ್ಟಬಹುದು. ಹೊಸದಾಗಿ ಕ್ರೀಸಿಗೆ ಬರುವ ಬ್ಯಾಟ್ಸ್ಮನ್ 10 ರನ್ ಗಳಿಸುತ್ತಾನೋ ಇಲ್ಲವೋ ಅಥವಾ ಮುಂದಿನ ಓವರಿನಲ್ಲಿ ಬೌಂಡರಿ ಬಾರಿಸುತ್ತಾನೋ ಇಲ್ಲವೋ ಮುಂಚಿತಾಗಿಯೂ ಬೆಟ್ ಕಟ್ಟಲಾಗುತ್ತದೆ.ಹೀಗಾಗಿ ಸ್ಪಾಟ್ ಬೆಟ್ಟಿಂಗ್ ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದ ಹಾಗಿದೆ.
ಇವೆಲ್ಲವೂ ಆಯಾ ಕ್ಷಣಗಳಲ್ಲಿ ಕಟ್ಟುವ ಬೆಟ್ಗಳು. ಇಂತಹ ಬೆಟ್ ಸ್ವೀಕರಿಸುವ ಭಾರೀ ದೊಡ್ಡ ಜಾಲವೇ ಇದೆ. ಮುಖ್ಯವಾಗಿ ಮೊಬೈಲ್ ಫೋನ್ ಮುಖಾಂತರವೆ ಈ ಬೆಟ್ಗಳು ನಡೆಯುತ್ತವೆ. ಇವೇ ಸ್ಪಾಟ್ ಬೆಟ್ಟಿಂಗ್.
ಇಂತಹ ಸ್ಪಾಟ್ ಬೆಟ್ಟಿಂಗ್ನ್ನು ಗೆಲ್ಲಲು ನಡೆಸುವುದೇ ಸ್ಪಾಟ್ ಫಿಕ್ಸಿಂಗ್. ಒಬ್ಬಾತನಿಗೆ ಒಂದು ಓವರಿನಲ್ಲಿ ನೋಬಾಲ್ ಪ್ರಯೋಗಿಸಲ್ಪಡುತ್ತದೆ ಎಂದು ಮುಂಚಿತವಾಗಿಯೆ ಅರಿವಿದ್ದರೆ ಹಾಗೂ ಆ ಕುರಿತಂತೆ ಅವನು ಲಕ್ಷಾಂತರ ರೂಪಾಯಿ ಬೆಟ್ ಕಟ್ಟಿದರೆ ಅದೆಷ್ಟು ಹಣ ಸಂಗ್ರಹಿಸಬಹುದು ಯೋಚಿಸಿ.
ಇಂಗ್ಲೆಂಡಿನಲ್ಲಿ ಪಾಕ್ ವಿರುದ್ಧದ ಟೆಸ್ಟಿನಲ್ಲಿ ಆಗಿರುವುದೂ ಹಾಗೆಯೆ. ಮಜೀದ್ ನೋಬಾಲ್ ಎಸೆಯಲು ಮೊದಲೇ ಆಟಗಾರರನ್ನು ಫಿಕ್ಸ್ ಮಾಡಿದ್ದ. ಅದಕ್ಕಾಗಿ ಆಟಗಾರರಿಗೆ ದುಡ್ಡನ್ನೂ ಕೊಟ್ಟಿದ್ದ. ಆದರೆ ಆತ ಆ ಓವರಿನಲ್ಲಿ ನೋಬಾಲ್ಗಳು ಪ್ರಯೋಗಿಸಲ್ಪಡುತ್ತವೆ ಎಂದು ಬುಕ್ಕಿಗಳಲ್ಲಿ ಬೆಟ್ ಕಟ್ಟಿ ಆಟಗಾರರಿಗೆ ಕೊಟ್ಟಿರುವ ಹಣದ ನಾಲ್ಕು ಪಟ್ಟು ಹಣವನ್ನು ಬುಕ್ಕಿಗಳಿಂದ ಗಳಿಸಿರುವ ಸಾಧ್ಯತೆಯಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications