ಅಪರೂಪದ ಸಸ್ಯಗಳ ನಿಜ ಸಂರಕ್ಷಕ ಗಣೇಶ

ಕಳೆದ ಮುರ್ನಾಲ್ಕು ದಶಕಗಳಿಂದ ಮಹಾರಾಷ್ಟ್ರ, ಕರ್ನಾಟಕ ಹಾಗೂ ಕೇರಳ ರಾಜ್ಯಗಳ ಪಶ್ಚಿಮ ಘಟ್ಟ ಅರಣ್ಯಗಳಲ್ಲಿ ಅವ್ಯಾಹತ ಕಳ್ಳ ಸಾಗಾಣಿಕೆಯಿಂದಾಗಿ ಈ ಔಷಧ ಸಸ್ಯಗಳು ವಿರಳವಾಗಿದ್ದವು. ಉತ್ತರ ಕನ್ನಡ ಹಾಗೂ ಬೆಳಗಾವಿ ಅರಣ್ಯಗಳಿಂದಲೂ ಈ ಸಸ್ಯಗಳನ್ನು ಈವರೆಗೂ ದೋಚಲಾಗುತ್ತಿತ್ತು. ಔಷಧಿ ಕಂಪನಿಗಳಿಂದ ಈ ಸಸ್ಯಗಳಿಗಿರುವ ಬೇಡಿಕೆಯಿಂದಾಗಿ ಇವುಗಳನ್ನು ರಾಜಾರೋಷವಾಗಿ ಸಾಗಿಸಲಾಗುತ್ತಿತ್ತು. ಆದರೆ ಇತ್ತೀಚಿನ ಅರಣ್ಯ ಇಲಾಖೆಯ ಕಾರ್ಯಚರಣೆಗಳಿಂದ ಕಳ್ಳ ಸಾಗಾಣೆದಾರರಿಗೆ ಸ್ವಲ್ಪ ತಡೆಯುಂಟಾಗಿದೆ.
ಸಲೇಶಿಯಾ(salacia plant) ಹಾಗೂ ಮಾಪ್ಪಿಯಾ(mappia foetida) ಔಷಧಿ ಗಿಡಗಳ ಸಂರಕ್ಷಣೆಗೆ ಕಾರವಾರದ ಗಣೇಶ ನೇವರೇಕರ್ ಈಗ ಮುಂದಾಗಿ ಈ ಸಸ್ಯಗಳ ನರ್ಸರಿ ಹಾಗೂ ನೆಡುತೋಪುಗಳನ್ನು ಬರ್ಗಲ್ದಲ್ಲಿ ಬೆಳೆಸುತ್ತಿದ್ದಾರೆ.ಸಕ್ಕರೆ ರೋಗ ಹಾಗೂ ಕ್ಯಾನ್ಸರ್ ಚಿಕಿತ್ಸೆಗಳಿಗೆ ರಾಮಬಾಣವಾಗಿರುವ ಈ ಸಸ್ಯಗಳಿಗೆ ಈಗ ಎಲ್ಲಲ್ಲದ ಬೇಡಿಕೆಯಿದೆ. ಎಂ.ಬಿ.ಎ ಪದವಿ ಮುಗಿಸಿದ ನಂತರ ಸ್ವ - ಉದ್ಯೋಗ ಕೈಗೊಳ್ಳುವ ವಿಚಾರದಲ್ಲಿದ್ದ ಗಣೇಶನಿಗೆ ಅಯುರ್ವೆದ ತಜ್ಞ ದಿ: ಡಾ ಫಾಯದೆ ಮಾರ್ಗದರ್ಶನ ನೀಡಿದ್ದರು.
ಕಾರವಾರದ ಸರಕಾರಿ ಕಾಲೇಜಿನ ಸಸ್ಯ ಶಾಸ್ತ್ರಜ್ಞ ಪ್ರೋ. ಜಯಕರ ಭಂಡಾರಿ ಅವರು ಈ ಔಷಧಿ ಸಸ್ಯಗಳ ಕಳ್ಳಸಾಗಣೆ ಹಾಗೂ ಇವುಗಳ ಮಹತ್ವವನ್ನು ತಿಳಿಸಿ ನೆಡುತೋಪು ಹಾಗೂ ಸಂರಕ್ಷಣೆಗೆ ದಾರಿ ತೋರಿಸಿದರು. ಹೀಗಾಗಿ ಸದ್ಯ ಕಾಡಿನಂಥ ತೋಟದಲ್ಲಿ ಈ ಎರಡು ಸಸ್ಯಗಳನ್ನು ಗಣೇಶ ಬೆಳೆಸುತ್ತಿದ್ದಾರೆ.
ಅಲ್ಲದೆ ಈ ಸಸ್ಯಗಳ ಸಂರಕ್ಷಣೆ ಹಾಗೂ ಮಹತ್ವ ಕುರಿತು ತಮ್ಮ ಪರಿಚಯಸ್ಥರಲ್ಲಿ ಜಾಗೃತಿ ಮೂಡಿಸಿ ಅವರನ್ನು ಸಹ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯ 6 ಜನರು ಇವರ ಕೈ ಜೋಡಿಸಿದ್ದಾರೆ. ಸದ್ಯ ಅವರು ಸಲೇಶಿಯಾ ಹಾಗೂ ಮಾಪಿಯಾ ಸಸ್ಯಗಳ ಸಸಿಗಳನ್ನು ರಿಯಾಯತಿ ದರದಲ್ಲಿ ನೀಡುತ್ತಿದ್ದು ಕೆಲ ಔಷಧಿ ಕಂಪನಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ.
ಇವುಗಳ ಜೊತೆ ಇತರೆ ಕೆಲ ಔಷಧಿ ಹಾಗೂ ಸುಗಂಧಿ ದ್ರವ್ಯ ಸಸ್ಯಗಳನ್ನು ಸಹ ಗಣೇಶ ಬೆಳೆಸುತ್ತಿದಾರೆ. ಪಚೋಲಿ, ವೆಟಿವರ್ ಹಾಗೂ ಲೆಮನ್ ಗ್ರಾಸ್ಗಳನ್ನು ಬೆಳೆದು ಇವುಗಳಿಂದ ಸುಗಂಧ ಎಣ್ಣೆಯನ್ನು ಉತ್ಪಾದಿಸುತ್ತಾರೆ. ಗಣೇಶ ನೇವರೇಕರ ಅವರನ್ನು ಮೋಬೈಲ್ ಸಂ: 94481 05381 ಮೂಲಕ ಸಂಪರ್ಕಿಸಬಹುದಾಗಿದೆ.












Click it and Unblock the Notifications