ಒಂಬತ್ತು ತಿಂಗಳ ಗರ್ಭಿಣಿ ಪತ್ನಿಗೆ ಬೆಂಕಿ ಇಟ್ಟ ಪತಿ
ಮೆಹರುನ್ನೀಸಾ(24) ಬೆಂಕಿ ಹಚ್ಚಿಸಿಕೊಂಡ ನೃತದೃಷ್ಟ ಹೆಣ್ಣು ಮಕ್ಕಳು. ಕಳೆದ ಮೂರು ವರ್ಷಗಳ ಹಿಂದೆ ಅಗೋರಿ ರಾಮನ್ ಕಿಶೋರ್ ಎಂಬುವವರನ್ನು ಮೆಹರುನ್ನೀಸಾ ಮದುವೆಯಾಗಿದ್ದರು. ಮದುವೆ ನಂತರ ಕಿಶೋರ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು, ಸಯ್ಯದ್ ಅಬ್ದುರ್ ರೆಹಮಾನ್ ಎಂದು ಹೆಸರು ಬದಲಿಸಿಕೊಂಡಿದ್ದ.
ಮೆಹರುನ್ನೀಸಾ ಹೇಳಿಕೆ : ಮೊದಲೆರಡು ವರ್ಷ ಸಂಸಾರ ಸುಖಮಯವಾಗಿತ್ತು. ಆದರೆ, ಗರ್ಭಿಣಿ ಆದ ನಂತರ ಪತಿಯ ನಡವಳಿಕೆಯಲ್ಲಿ ಬಾರಿ ಬದಲಾವಣೆಗಳು ಕಂಡು ಬರತೊಡಗಿದವು. ಯಾವ ಒತ್ತಡವಿಲ್ಲದೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಕಿಶೋರ್ ಬರುಬರುತ್ತಾ, ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಆಗಲು ಪೀಡಿಸತೊಡಗಿದ. ಆದರೆ, ನಾನು ಅದನ್ನು ವಿರೋಧಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರು ನಡುವೆ ಪದೇಪದೆ ವಾಗ್ವಾದ, ಆರೋಪ, ಪ್ರತ್ಯಾರೋಪಗಳು ನಡೆಯುತ್ತಿದ್ದವು.
ನಾನು ಗರ್ಭಿಣಿ ಆದ ನಂತರ ತನ್ನ ಪೋಷಕರೊಂದಿಗೆ ಪತಿ ವಾಸಿಸುತ್ತಿದ್ದ. ಈ ಸಂದರ್ಭದಲ್ಲಿ ಅವರ ಪೋಷಕರು ಆತನನ್ನು ಹಿಂದು ಧರ್ಮಕ್ಕೆ ಮತಾಂತರವಾಗು ಎಂದು ಪ್ರೆರೇಪಿಸಿದ್ದರಿಂದ ನನಗೆ ಹಿಂದೂ ಧರ್ಮಕ್ಕೆ ಮತಾಂತರವಾಗುವಂತೆ ಕಾಡತೊಡಗಿದ. ಅಲ್ಲದೇ ಕೆಲಸಕ್ಕೆ ಹೋಗುವುದು ಬೇಡ ಎಂದು ಒತ್ತಾಯಿಸತೊಡಗಿದ. ಆದರೆ, ನನ್ನ ಮನೆಯಲ್ಲಿ ನಾನೇ ಹಿರಿಯವಳು ಜೊತೆಗೆ ಆರ್ಥಿಕ ಸಂಕಷ್ಟ ಇದ್ದುದ್ದರಿಂದ ಕೆಲಸ ಬಿಡಲು ನಿರಾಕರಿಸಿದೆ.
ಹೀಗಾಗಿ ಈ ಎರಡು ಕಾರಣಗಳು ನಮ್ಮಿಬ್ಬರ ಸಂಬಂಧ ಕೆಡಲು ಕಾರಣವಾಗಿದೆ. ಪತಿ ಸಯ್ಯದ್ ಅಲಿಯಾಸ್ ಕಿಶೋರ್ ನನ್ನ ದೇಹಕ್ಕೆ ಆಯಿಂಟ್ ಮೆಂಟ್ ಹಚ್ಚುವ ನೆಪದಲ್ಲಿ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ. ಅಕ್ಕಪಕ್ಕದವರು ಬಂದು ನನ್ನ ಜೀವ ಉಳಿಸಿದರು ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮೆಹರುನ್ನೀಸಾ ಹೇಳಿದ್ದಾರೆ.
ಶೇ. 35ರಷ್ಟು ಸುಟ್ಟ ಗಾಯಳಿಂದ ಬಳಲುತ್ತಿರುವ ಮೆಹರುನ್ನೀಸಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯೊಂದಿಗೆ ಜೀವಿಸಲು ಇಷ್ಟವಿಲ್ಲ. ಹೀಗಾಗಿ ವಿಚ್ಚೇದನಕ್ಕೆ ಅರ್ಜಿ ಹಾಕಿರುವುದಾಗಿ ಅವರು ಹೇಳಿದ್ದಾರೆ.