ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುತ್ತುಲಕ್ಷ್ಮಿ ನೆರವಿಗೆ ಯಾರೂ ಬರುತ್ತಿಲ್ಲವಂತೆ!
ಹಲವು ವರ್ಷಗಳ ಹಿಂದೆ ಕರ್ನಾಟಕದ ವಿಭಾಗೀಯ ಅರಣ್ಯಾಧಿಕಾರಿ ಶ್ರೀನಿವಾಸನ್ ರನ್ನು ವೀರಪ್ಪನ್ ತಂಡ ಹತ್ಯೆ ಮಾಡಿದ ಪ್ರಕರಣ ಸೇರಿದಂತೆ ಮುತ್ತುಲಕ್ಷ್ಮಿ ವಿರುದ್ದ 5 ಮೊಕದ್ದಮೆಗಳು ಬಾಕಿ ಇವೆ. ಆಕೆಯನ್ನು ನೋಡಲು ಆಕೆಯ ಇಬ್ಬರು ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಬೇರೆ ಯಾರಿಗೂ ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ಧನಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುತ್ತುಲಕ್ಷ್ಮಿ ಬಿಡುಗಡೆ ತಮಿಳುನಾಡು ಮಾನವ ಸಂಪನ್ಮೂಲ ಸಮಿತಿ ಸಹಾಯ ಸಹಕಾರ ನೀಡುವುದಾಗಿ ಈ ಹಿಂದೆ ಘೋಷಿಸಿತ್ತು. ಆದರೆ, ಇದೀಗ ಅವರು ಕೂಡಾ ಸಹೋದರಿಯ ಬಿಡುಗಡೆಗೆ ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ. ವೀರಪ್ಪನ್ ಇಬ್ಬರು ಹೆಣ್ಣುಮಕ್ಕಳಲ್ಲಿ ಹಿರಿಯ ಮಗಳು ಬಿಎ ಇಂಗ್ಲಿಷ್ ಓದುತ್ತಿದ್ದರೆ, ಕಿರಿಯ ಮಗಳು ಚೆನ್ನೈಯ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
Comments
Story first published: Thursday, August 26, 2010, 16:19 [IST]