ಸ್ವಯಂವರಕ್ಕೆ ಮೊರೆಹೋದ 55 ರ ಹಿರಿವಧು

ಮಕ್ಕಳಿಂದ ದೂರವಾಗಿ ಜೀವನ ನಡೆಸುತ್ತಿರುವ 55 ವರ್ಷದ ವಿಧವೆಯೊಬ್ಬರು, ಸ್ವಯಂವರ ನಡೆಸಿ ನೂತನ ಬಾಳಸಂಗಾತಿಯನ್ನು ಆರಿಸಿಕೊಂಡು ಸಂಭ್ರಮಪಟ್ಟ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿದೆ.
ಆನಂದ್ ಜಿಲ್ಲೆಯ ಭಾನುಮತಿ ಹೊಸ ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಿರಿಯ ವಧು.50ರ ಆಸುಪಾಸಿನ ಹರಯದ ರಾಜೇಂದ್ರ ರಾವಲ್ ಅವರು ಭಾನುಮತಿ ಅವರನ್ನು ವರಿಸಿದ್ದರು. ರಾಜೇಂದ್ರ ಗಾಂಧೀನಗರದ ಮನ್ಸಾದವರು. ತೀವ್ರ ಕುತೂಹಲ, ಅಚ್ಚರಿ ಮೂಡಿಸಿದ್ದ ಈ ಸ್ವಯಂವರದಲ್ಲಿ ಸುಮಾರು 36 ವರರು ಪಾಲ್ಗೊಂಡಿದ್ದರು.
ವಯಸ್ಸು 50 ದಾಟುತ್ತಿದ್ದಂತೆ ಜೀವನ ಕಳೆಯುವುದು ಕಷ್ಟ. ಸಮಾಜದಿಂದಾಗುವ ಕಷ್ಟ, ಕಾರ್ಪಣ್ಯಗಳಿಗೆ ಅವಕಾಶ ಮಾಡಿಕೊಡದಿರಲು ತಾನು ಈ ನಿರ್ಧಾರ ಕೈಗೊಂಡಿದ್ದಾಗಿ ಸ್ವಯಂವರದಲ್ಲಿ ವರನನ್ನು ಅಂತಿಮಗೊಳಿಸಿದ ನಂತರ ಭಾನುಮತಿ ಸಂತಸ ವ್ಯಕ್ತಪಡಿಸಿದ್ದಾರೆ.
ವಿಧವೆಯಾದ ತನಗೆ ಮತ್ತೊಂದು ಮದುವೆಯಾಗಿರುವುದು ಸಂತಸ ತಂದಿದೆ. ವೃದ್ಧಾಶ್ರಮಗಳಲ್ಲಿ ಬದುಕುವುದಕ್ಕಿಂತ ವಿವಾಹ ಜೀವನ ನಡೆಸುವುದು ನನಗೆ ಉತ್ತಮ ಎನಿಸಿದೆ. ತಮ್ಮದೇ ಹಾದಿಯನ್ನು ತಮ್ಮ ವಯಸ್ಸಿನ ಮಹಿಳೆಯರು ತುಳಿದರೆ ಅವರ ಜೀವನವೂ ಉತ್ತಮಗೊಳ್ಳುತ್ತದೆ ಎಂಬುದು ಭಾನುಮತಿ ನೀಡಿರುವ ಸಲಹೆ.
ವರ ರಾವಲ್ದು ಇದೇ ಅಭಿಪ್ರಾಯ. ಜೀವನದ ಕಟ್ಟಕಡೆಯ ದಿನಗಳನ್ನು ಸುಖಕರವಾಗಿ ಕಳೆಯಲು ತಾನು ಭಾನುಮತಿಯನ್ನು ವರಿಸಿದ್ದೇನೆಂಬುದು ಅವರು ವಿವಾಹಕ್ಕೆ ನೀಡಿರುವ ಕಾರಣ. ನಾಥುಬಾಯಿ ಪಟೇಲ್ ನೇತೃತ್ವದ ಎನ್ಜಿಒ ಸಂಸ್ಥೆ ಮುಲ್ಯಾ ಅಮೂಲ್ಯ ಸೇವಾ ಸಂಘಟನೆ ಈ ಸ್ವಯಂವರವನ್ನು ಆಯೋಜಸಿತ್ತು.
ಒಟ್ಟು 36 ಜನರು ಪಾಲ್ಗೊಂಡಿದ್ದ ಸ್ವಯಂವರದ ಮೊದಲ ಸುತ್ತಿಗೆ 10 ಜನರು ಆಯ್ಕೆಯಾಗಿದ್ದರು. ನಂತರ ಅಂತಿಮ ಸುತ್ತಿಗೆ ಮೂವರ ಆಯ್ಕೆಯಾಗಿದ್ದರು. ಅಂತಿಮವಾಗಿ ಭಾನುಮತಿ ರಾಜೇಂದ್ರ ರಾವಲ್ಗೆ ಮಾಲೆ ಹಾಕಿದ್ದಾರೆ.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications