ಸ್ವಾಮೀಜಿಗಳನ್ನು ನಪುಂಸಕರನ್ನಾಗಿ ಮಾಡಿ

ದಾವಣಗೆರೆಯ ಅಭಿನವ ರೇಣುಕಾಚಾರ್ಯ ಮಂದಿರದಲ್ಲಿ ನಡೆದ ಶ್ರೀ ಜಗದ್ಗುರು ಚನ್ನಬಸವ ರಾಜದೇಶಿಕೇಂದ್ರ ಸ್ವಾಮೀಜಿಗಳು ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಹುಟ್ಟಿನಿಂದ ಸಾಯುವವರೆಗೆ ಬ್ರಹ್ಮಚರ್ಯ ಅಸಾಧ್ಯ. ಸ್ವಾಮೀಜಿಗಳು ಬ್ರಹ್ಮಚರ್ಯವನ್ನು ಪಾಲಿಸುವುದು ಕಡ್ಡಾಯವಾದರೆ ಸ್ವಾಮೀಜಿ ಸ್ಥಾನಕ್ಕೆ ನೇಮಕಗೊಳ್ಳುವವರನ್ನು ಮೊದಲು ನಪುಂಸಕರನ್ನಾಗಿ ಮಾಡಬೇಕು ಎಂದು ಚನ್ನಮಲ್ಲ ಸ್ವಾಮೀಜಿ ಹೇಳಿದ್ದಾರೆ.
ಹೊಟ್ಟೆಯಲ್ಲಿರುವ ಮಲ-ಮೂತ್ರದಂತೆ ದೇಹದ ಕೊಳೆಯಾದ ಅಂಡಾಣು-ವಿರ್ಯಾಣುವನ್ನು ಹೊರಹಾಕಲೇಬೇಕು. ಹಿಮಾಲಯದ ಗವಿಗಳಲ್ಲಿ ತಪಸ್ಸಿಗೆ ಕೂತವರಿಗೆ ಹೊಯ್ದಾಟ, ದ್ವಂದ್ವತೆ ಇರುವಾಗ ವೈಭೋಗದಲ್ಲಿರುವ ಮಠಾಧೀಶರಿಂದ ಬ್ರಹ್ಮಚರ್ಯ ನಿರೀಕ್ಷೀಸಲು ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.












Click it and Unblock the Notifications