ಹೊಸ ಅಧ್ಯಾಯಕ್ಕೆ 50ರ ಮಹಿಳಾಮಣಿಗಳ ಮುನ್ನುಡಿ
ಬೆಂಗಳೂರು, ಜು. 1 : ನಲವತ್ತು ದಾಟುತ್ತಿದ್ದಂತೆ ಜೀವನೋತ್ಸಾಹ ಕಳೆದುಕೊಂಡವರಂತೆ ಆಡುವಂಥ ಮಹಿಳೆಯರಿಗೆ ಉತ್ಸಾಹ ತುಂಬುವಂಥ ಸುದ್ದಿಯಿದೆ ಓದಿ. ವಿಚ್ಛೇದನ ಪಡೆದುಕೊಂಡವರು, ಗಂಡನನ್ನು ಕಳೆದುಕೊಂಡವರು ಸಮಾಜದ ಕಟ್ಟಳೆಗಳನ್ನು ಧಿಕ್ಕರಿಸಿ ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ, ಅದೂ ಐವತ್ತು ದಾಟಿದ ನಂತರ!
ಹೌದು, ಜೀವನಸಾಥಿ ಮದುವೆ ಅಂತರ್ಜಾಲ ತಾಣದಲ್ಲಿ ನೊಂದಾಯಿಸಿಕೊಂಡು ಎರಡನೇ ಬಾಳ ಸಂಗಾತಿಗೆ ಹುಡುಕುತ್ತಿರುವ ಶೇ.70ರಷ್ಟು ಮಹಿಳೆಯರು ಹೊಸ ಜೀವನಕ್ಕಾಗಿ ಕಾದು ಕುಳಿತಿದ್ದಾರೆ. ಸುತ್ತಲಿನ ಸಮಾಜ ಏನು ಹೇಳುತ್ತದೆ ಎಂಬುದನ್ನು ಕಿವಿಗೆ ಹಾಕಿಕೊಳ್ಳದೆ ತಮ್ಮ ಹೃದಯದ ಮಾತನ್ನು ಹೆಚ್ಚಿನ ಮಧ್ಯ ವಯಸ್ಸು ದಾಟಿದ ಮಹಿಳೆಯರು ಕೇಳುತ್ತಿದ್ದಾರೆ.
ಇದರಲ್ಲಿ ತಪ್ಪೇನು ಇಲ್ಲ. ಏಕಾಂಗಿಯಾಗಿರುವ, ಗಂಡನಿಂದ ದೂರಾಗಿರುವ, ವಿಧವೆಯಾಗಿರುವ, ವಿಚ್ಛೇದಿತರಾಗಿರುವ ಐವತ್ತು ದಾಟಿದ ಮಹಿಳೆಯರು ಸಂಧ್ಯಾಕಾಲದಲ್ಲಿ ಆಸರೆಯನ್ನು ಬಯಸುವುದು ಸಹಜ. ಹಾಗೆಯೇ, ಬಾಳ ಸಂಗಾತಿಯನ್ನು ಅಂತರ್ಜಾಲದ ಮುಖಾಂತರ ಹುಡುಕುವುದು ಕೂಡ ಸುಲಭ.
ಇಂಟರ್ನೆಟ್ ನಲ್ಲಿ ಮಾಹಿತಿಗಳು ಬೆರಳ ತುದಿಯಲ್ಲೇ ಲಭ್ಯವಾಗುತ್ತಿರುವುದರಿಂದ ಐವತ್ತರ ಹರೆಯ ದಾಟಿದ ಮಹಿಳಾಮಣಿಗಳು ಮದುವೆ ತಾಣಕ್ಕೆ ಮಾರುಹೋಗುತ್ತಿದ್ದಾರೆ. ಮದುವೆ ತಾಣದಲ್ಲಿ ನೊಂದಾಯಿಸಿಕೊಂಡವರಲ್ಲಿ ಶೇ.70ರಷ್ಟು ಮಹಿಳೆಯರು ತಾವೇ ಸ್ವತಃ ತಮ್ಮ ಬಗ್ಗೆ ಮಾಹಿತಿಯನ್ನು ದಾಖಲಿಸಿದ್ದಾರೆ, ಜೀವನಸಂಗಾತಿಯ ಹುಡುಕಾಟದಲ್ಲಿ ತಲ್ಲೀನರಾಗಿದ್ದಾರೆ.
ಇನ್ನೂ ಆಶ್ಚರ್ಯಕರ ಸಂಗತಿಯೆಂದರೆ, ಈ ಮಹಿಳೆಯರಲ್ಲಿ ಶೇ.60ರಷ್ಟು ಭಾರತೀಯರು ಮತ್ತು ಉಳಿದವರು ಎನ್ಆರ್ಐಗಳು. ನಲವತ್ತು ದಾಟಿದ ನಂತರ ಹೆಂಗಸರಿರಲಿ ಗಂಡಸರು ಕೂಡ ಮದುವೆ ಬಗ್ಗೆ ನಿರಾಸಕ್ತಿ ತಳೆಯುವ ಇಂಥ ಕಾಲದಲ್ಲಿ ಮಹಿಳೆಯರು ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯುತ್ತಿದ್ದಾರೆ. ಇದು ಪುರುಷರಿಗೂ ದಾರಿದೀಪವಾಗಲಿ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications