ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವುದೇ ರಹಸ್ಯ ಸಭೆ ನಡೆಸಿಲ್ಲ:ಆರ್ ಅಶೋಕ್

By Mahesh
|
Google Oneindia Kannada News

R Ashoka
ಬೆಂಗಳೂರು, ಜೂ.29: ಕೆಎಂಎಫ್ ನಿರ್ದೇಶಕ ಸ್ಥಾನಕ್ಕೆ ದಿಢೀರನೇ ರಾಜೀನಾಮೆ ನೀಡಿರುವ ಸಂಸದ ಡಿವಿ ಸದಾನಂದಗೌಡರು ಒಕ್ಕಲಿಗ ಸಮುದಾಯವನ್ನು ಒಗ್ಗೂಡಿಸಿ, ರೆಡ್ಡಿ ಬಣದ ವಿರುದ್ಧ ದನಿ ಎತ್ತಲು ಸಜ್ಜಾಗಿದ್ದಾರೆ. ತಮ್ಮ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಬೇಕೆಂದು ಆಗ್ರಹಿಸಲು ರಹಸ್ಯಸಭೆ ಸೇರಿದ್ದಾರೆ ಎಂಬ ವರದಿಯನ್ನು ಸಚಿವ ಆರ್ ಅಶೋಕ್ ಅಲ್ಲಗೆಳೆದಿದ್ದಾರೆ.

'ಈಶ್ವರಪ್ಪ ಹಾಗೂ ಸದಾನಂದಗೌಡ ಮುಖಾಮುಖಿ ಮಾತನಾಡಿದ್ದಾರೆ. ಇದು ಆಂತರಿಕ ವಿಷಯ ನಾವು ಬಗೆಹರಿಸಿಕೊಳ್ಳುತ್ತೇವೆ. ಸದಾನಂದಗೌಡ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ಈಶ್ವರಪ್ಪ ಅವರಿಗೆ ತಿಳಿದಿದೆ.

ಯಾವುದೇ ಬೇಡಿಕೆ ಸರ್ಕಾರದ ಮುಂದಿಟ್ಟಿಲ್ಲ. ಭಿನ್ನಮತ ಚಟುವಟಿಕೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ಬಂದಿರುವುದು ಸತ್ಯಕ್ಕೆ ದೂರವಾದ ಮಾತು ಎಂದು ಸಾರಿಗೆ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಕಳೆದ ರಾತ್ರಿ ಸದಾನಂದ ಗೌಡರ ನಿವಾಸದಲ್ಲಿ ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಾಸಕರು, ಮುಖಂಡರು ಸಭೆ ಸೇರಿ, ಸರ್ಕಾರದಲ್ಲಿ ಒಕ್ಕಲಿಗ ಗೌಡ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ಸಿಗಬೇಕು ಎಂದು ಆಗ್ರಹಿಸಲು ನಿರ್ಧರಿಸಲಾಗಿದೆ. ಶೋಭಾ ಕರಂದ್ಲಾಜೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡುವುದು, ಸದಾನಂದಗೌಡರಿಗೆ ಸೂಕ್ತ ಸ್ಥಾನಮಾನ ನೀಡುವುದು ಒಕ್ಕಲಿಗ ಸಮುದಾಯದ ಆದ್ಯ ಬೇಡಿಕೆ ಎನ್ನಲಾಗಿದೆ.

ವಿಧಾನಮಂಡಲ ಅಧಿವೇಶನದ ನಂತರ ಪಕ್ಷದ ಹಿರಿಯ ನಾಯಕರ ಜೊತೆ ಚರ್ಚಿಸಿ, ಸದಾನಂದಗೌಡರಿಗೆ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ವಿಶ್ವಸನೀಯ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X