ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿಸಿಸಿ ಅಧ್ಯಕ್ಷ ಪಟ್ಟದ ಮೇಲೆ ಅಂಬಿ ಕಣ್ಣು?

By Mahesh
|
Google Oneindia Kannada News

Ambareesh
ಮಂಡ್ಯ,ಜೂ.27: ಹೈಕಮಾಂಡ್ ಸಮ್ಮತಿಸಿದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾರಥ್ಯ ವಹಿಸಲು ತಾವು ಸಿದ್ಧ ಎಂದು ಕೇಂದ್ರ ಮಾಜಿ ಸಚಿವ, ಚಿತ್ರನಟ ಅಂಬರೀಶ್ ಮನದಾಳದ ಇಂಗಿತ ಹೊರಗೆಡವಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಎಚ್ ಕೆ ಪಾಟೀಲ್, ಬಿಎಲ್ ಶಂಕರ್ ಸೇರಿದಂತೆ ಹಲವಾರ ಹೆಸರುಗಳು ಕೇಳಿ ಬಂದಿದ್ದವು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನೀಡುವ ಯಾವುದೇ ಜವಾಬ್ದಾರಿಯನ್ನು ನಿಭಾಯಿಸಲು ಸಿದ್ಧರಿರುವುದಾಗಿ ಹೇಳಿದರು.

ಪರಮಾಧಿಕಾರ ಬೇಕು : ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ರಾಜೀನಾಮೆ ಕುರಿತು ಮಾತನಾಡಿದ ಅವರು, ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವುದು ಅನಿವಾರ್ಯ.

ಸಂತೋಷ್ ಹೆಗ್ಡೆ ಅವರು ಸುದೀರ್ಘ ಕಾಲ ಚಿಂತಿಸಿಯೇ ರಾಜೀನಾಮೆ ನಿರ್ಧಾರ ಕೈಗೊಂಡಿದ್ದಾರೆ. ಅವರ ತೀರ್ಮಾನ ಸರಿಯಾಗಿದೆಯಾದರೂ ಸರ್ಕಾರ ಲೋಕಾಯುಕ್ತರಿಗೆ ಅಧಿಕಾರ ಮೊಟಕು ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X