ವಿಶ್ವಕಪ್ ನಿಂದ ಹೊರಬೀಳುವ ಮೊದಲ ತಂಡ?
ಮುಂದಿನ ಸುತ್ತಿಗೆ ಪ್ರವೇಶ ಪಡೆವ ನಿರೀಕ್ಷಿತ ತಂಡಗಳು ಮೊದಲ ಸುತ್ತಿನಲ್ಲೇ ನಿರ್ಗಮಿಸುವ ಸೂಚನೆಗಳು ಕಂಡುಬಂದಿವೆ. ಆಫ್ರಿಕಾದ ಬಲಿಷ್ಠ ತಂಡಗಳಲ್ಲಿ ಒಂದಾದ ಕೆಮರೂನ್, ಟೂರ್ನಿಯಿಂದ ಹೊರ ಬೀಳುವ ಕಾಲ ಸನ್ನಿಹಿತವಾಗಿದೆ.
ಇಂಟರ್ ಮಿಲಾನ್ ಪರ ಆಡುವ ಸ್ಯಾಮುಯಲ್ ಎಟೋ, ಪೆರ್ರೆ ವೆಬೂ, ಎರಿಕ್ ಚೌಪ್ರೊ ಮುಂತಾದ ಆಟಗಾರರಿದ್ದರೂ ತನ್ನ ಎಂದಿನ ಛಾಪು ಮೂಡಿಸುವಲ್ಲಿ ಕೆಮರೂನ್ ಸೋತಿದೆ. ಈ ಗುಂಪಿನಲ್ಲಿರುವ ಕೆಮರೂನ್ ಜಪಾನ್ ಹಾಗೂ ಡೆನ್ಮಾರ್ಕ್ ವಿರುದ್ಧ ಸತತ ಸೋಲುಂಡಿದೆ.
'ಈ 'ಗುಂಪಿನ ಅಂತಿಮ ಪಂದ್ಯವನ್ನು ಜೂ.25ರಂದು ಕೇಪ್ ಟೌನ್ ನಲ್ಲಿ ಅಗ್ರಸ್ಥಾನದಲ್ಲಿರುವ ಹಾಲೆಂಡ್ ವಿರುದ್ಧ ಆಡಲಿದ್ದು, ಒಂದು ವೇಳೆ ಆ ಪಂದ್ಯ ಗೆದ್ದರೂ ಮುಂದಿನ ಹಂತಕ್ಕೆ ಅರ್ಹತೆ ಗಳಿಸುವುದು ಕಷ್ಟ. ಸದ್ಯದ ಅಂಕಿ ಅಂಶಗಳ ಪ್ರಕಾರ 'ಈ 'ಗುಂಪಿನಿಂದ 16 ರ ಸುತ್ತು ಪ್ರವೇಶಿಸುವ ಮೊದಲ ತಂಡವಾಗಿ ನೆದರ್ ಲ್ಯಾಂಡ್ ಹೊರಹೊಮ್ಮಿದೆ.
ಕೆಮರೂನ್ ವಿರುದ್ಧ ಸೋತರೂ ನೆದರ್ ಲ್ಯಾಂಡ್ 6 ಅಂಕಗಳಿಂದ ಎರಡನೇ ತಂಡವಾಗಿಯಾದರೂ ಪ್ರವೇಶ ಖಚಿತ ಪಡಿಸಿಕೊಂಡಿದೆ. ಆದರೆ, ಜಪಾನ್ ತಂಡ ಜೂ.25 ರಂದು ಡೆನ್ಮಾರ್ಕ್ ಅನ್ನು ಉತ್ತಮ ಗೋಲುಗಳ ಅಂತರದಿಂದ ಮಣಿಸಬೇಕು.ಪಂದ್ಯ ಡ್ರಾ ಆದರೂ ಜಪಾನ್ ಮುಂದಿನ ಹಂತಕ್ಕೆ ಹೋಗುವುದು ಗ್ಯಾರಂಟಿ. ಡೆನ್ಮಾರ್ಕ್ ಈ ಪಂದ್ಯವನ್ನು ಗೆಲ್ಲಲೇ ಬೇಕು.
ಸಾರಾಂಶ: 'ಈ' ಗುಂಪಿನಿಂದ ನೆದರ್ ಲ್ಯಾಂಡ್, ಜಪಾನ್ ಅಥವಾ ಡೆನ್ಮಾರ್ಕ್ ಮುಂದಿನ ಸುತ್ತಿಗೆ ಗ್ಯಾರಂಟಿ. ಕೆಮರೂನ್ ವಿಶ್ವಕಪ್ ನಿಂದ ಹೊರಬೀಳಲಿರುವ ಮೊದಲ ತಂಡ. ಅಫ್ರಿಕನ್ ಫುಟ್ಭಾಲ್ ಅಭಿಮಾನಿಗಳಿಗೆ ಕಹಿ ಸುದ್ದಿ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ













Click it and Unblock the Notifications