ಗೊಂದಲದ ಗೂಡಾದ ಅಂತರ್ ಧರ್ಮೀಯ ನಿಖಾ

Lovers
ಬೆಂಗಳೂರು, ಮೇ. 25 : ಹೈಕೋರ್ಟ್ ಮೆಟ್ಟಿಲೇರಿರುವ ಅಂತರ್ ಧರ್ಮೀಯ ಪ್ರೇಮ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಯುವತಿಯನ್ನು ರಿಮ್ಯಾಂಡ್ ಹೋಮ್ ಗೆ ಒಪ್ಪಿಸಿ ನ್ಯಾಯಾಲಯ ಆದೇಶ ನೀಡಿದೆ.

ಮುಸ್ಲಿಂ ಧರ್ಮದ ಸಂಪ್ರದಾಯದಂತೆ ವಿವಾದ ಮಾಡಿಕೊಂಡಿರುವುದಾಗಿ ನ್ಯಾಯಾಲಯದಲ್ಲಿ ಯುವತಿ ನೀಡಿದ ಹೇಳಿಕೆ ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದರಿಂದ ಆಕೆಯನ್ನು ನ್ಯಾ. ಕೆ ಎಲ್ ಮಂಜುನಾಥ್ ಮತ್ತು ನ್ಯಾ. ಪಚ್ಚಾಪೂರೆ ಅವರಿದ್ದ ವಿಭಾಗೀಯ ಪೀಠ ಮುಂದಿನ ಆದೇಶದವರೆಗೆ ರಿಮ್ಯಾಂಡ್ ಹೋಮ್ ಗೆ ಕಳುಹಿಸುವಂತೆ ಪೊಲೀಸರಿಗೆ ಸೂಚನೆ ನೀಡಿತು.

ಕಳೆದ ಮೇ 3 ರಂದು ಮನೆಯಿಂದ ನಾಪತ್ತೆಯಾದ ನಾಗಾವರ ದ ಮಾರ್ವಾಡಿ ಯುವತಿ ನೀತು, ಮೇ 17 ರಂದು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಮೊಹಮ್ಮದ್ ಸಮೀರ್ ಎಂಬ ಯುವಕನೊಂದಿಗೆ ಮೇ 19 ರಂದು ಮದುವೆಯಾಗಿದ್ದಳು. ತಮ್ಮ ಮಗಳನ್ನು ಸಮೀರ್ ಅಪಹರಿಸಿ ಬಲವಂತವಾಗಿ ಮತಾಂತರ ಮಾಡಿದ್ದಾನೆಂದು ಆರೋಪಿಸಿ ಯುವತಿಯ ತಂದೆ ರಾಮ್ ಲಾಲ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ನ್ಯಾಯಾಲಯದ ಆದೇಶದಂತೆ ಕೆಜಿ ಹಳ್ಳಿ ಪೊಲೀಸರು ತಮಿಳುನಾಡಿನ ಡೆಂಕಣಕೋಟೆಯಲ್ಲಿ ಯುವಕ-ಯುವತಿಯನ್ನು ಪತ್ತೆ ಮಾಡಿ ಹೈಕೋರ್ಟ್ ವಿಭಾಗೀಯ ಪೀಠದ ಮುಂದೆ ಹಾಜರುಪಡಿಸಿದ್ದರು. ಮೇ 17 ರಂದು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು, ಖಲೀಮ್, ಸಾಲತ್ ಹಾಗೂ ಜಖಾತ್ ನಿಯಮದ ಅನುಸಾರ ಮೇ 19 ಕ್ಕೆ ಸಮೀರ್ ನನ್ನು ಮದುವೆಯಾಗಿರುವುದಾಗಿ ನೀತು ಹೇಳಿದಳು.

ಆ ಸಂದರ್ಭದಲ್ಲಿ ನ್ಯಾಯಾಮೂರ್ತಿಗಳು, ಖಲೀಮ್, ಜಖಾತ್, ಸಾಲತ್ ಎಂಬ ಪದಗಳ ವಿವರಣೆ ಕೇಳಿದರು. ಆದರೆ, ಈಕೆ ಈ ಪದಗಳ ಬಗ್ಗೆ ಸಮರ್ಪಕವಾಗಿ ಉತ್ತರಿಸಲಿಲ್ಲ. ಜೊತೆಗೆ ಆಕೆಯ ವರ್ತನೆ ಅನುಮಾನಾಸ್ಪದವಾಗಿತ್ತು. ಹೀಗಾಗಿ ಮುಂದಿನ ಆದೇಶದವರೆಗೆ ಆಕೆಯನ್ನು ರಿಮ್ಯಾಂಡ್ ಹೋಮ್ ಗೆ ಒಪ್ಪಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+