ರಾಜಭವನ : ರಟ್ಟಾಗದ ದೇವೇಗೌಡರ ಗುಟ್ಟು

ಅಕ್ರಮ ಗಣಿಗೆ ಸಂಬಂಧಪಟ್ಟಂತೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ನೀಡಿದ್ದ ನೋಟಿಸ್ ಗೆ ಸಚಿವ ಜನಾರ್ದನರೆಡ್ಡಿ ಖಾರವಾಗಿ ನೀಡಿದ್ದ ಉತ್ತರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಬುಧವಾರ ಬೆಳಗ್ಗೆ 11.30ಕ್ಕೆ ರಾಜಭವನಕ್ಕೆ ಆಗಮಿಸಿದ ದೇವೇಗೌಡ, 1 ಗಂಟೆಗೂ ಅಧಿಕ ಹೊತ್ತು ರಾಜ್ಯಪಾಲರೊಂದಿಗೆ ಮಾತನಾಡಿದರು. ಇದರ ಬೆನ್ನಲ್ಲೇ ಕಾಂಗ್ರೆಸ್ ನ ಮುಖಂಡರಾದ ಸಿದ್ಧರಾಮಯ್ಯ, ಎಂಪಿ ಪ್ರಕಾಶ್, ಕೆ ಸಿ ಕೊಂಡಯ್ಯ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚೆ ನಡೆಸಿದರಲ್ಲದೇ ಮಹತ್ವದ ದಾಖಲೆಗಳನ್ನು ರಾಜ್ಯಪಾಲರಿಗೆ ನೀಡಿದ್ದಾರೆ ಎನ್ನಲಾಗಿದೆ.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೇಗೌಡ, ಗಣಿ ಸಚಿವರ ಬಗ್ಗೆ ನಾನೇನೂ ಮಾತನಾಡಿಲ್ಲ. ಎಲ್ಲವೂ ರಾಜ್ಯಪಾಲರಿಗೆ ಗೊತ್ತಿದೆ ಎಂದಷ್ಟೆ ಹೇಳಿದ್ದಾರೆ. ಕೇಂದ್ರದ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ. ಎನ್ ಆರ್ಇಜಿ ಹಣ ಕೂಡ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಖರ್ಚು ಮಾಡಲಾಗುತ್ತಿದೆ. ಈ ಬಗ್ಗೆ ಸರಕಾರಕ್ಕೆ ಸೂಕ್ತ ಸಲಹೆ ನೀಡಬೇಕೆಂದು ಮನವಿ ಮಾಡಲು ರಾಜ್ಯಪಾಲರನ್ನು ಭೇಟಿ ಮಾಡಿರುವುದಾಗಿ ಗೌಡರು ಹೇಳಿದರು.












Click it and Unblock the Notifications