ಕಸಬ್ ನನ್ನು ನೇಣಿಗೇರಿಸುವವರಾದರೂ ಯಾರು?

ಏಕೆಂದರೆ, ದೇಶದಲ್ಲಿ ಗಲ್ಲಿಗೇರಿಸುವವರು ಯಾರೂ ಇಲ್ಲ? ಪ್ರಸ್ತುತ ಪುಣೆಯ ಯರವಾಡಾ ಜೈಲಿನಲ್ಲಿ ಮಾತ್ರ ಗಲ್ಲು ಶಿಕ್ಷೆಗೊಳಗಾಗಿ ನ್ಯಾಯಾಲಯದಿಂದ ಅನುಮೋದನೆಗೊಳಗಾದ ಅಪರಾಧಿಗಳನ್ನು ಗಲ್ಲಿಗೇರಿಸಲಾಗುತ್ತಿದೆ. ಕಸಬ್ ನಿಗೆ ನೀಡಲಾಗಿರುವ ಗಲ್ಲು ಶಿಕ್ಷೆ ಎಲ್ಲ ಹಂತಗಳನ್ನು, ತೊಡಕುಗಳನ್ನು ದಾಟಿ ಗಲ್ಲು ಶಿಕ್ಷೆ ಖಾಯಂ ಆದರೆ ಇದೇ ಯರವಾಡಾ ಜೈಲಿನಲ್ಲಿ ಗಲ್ಲು ವಿಧಿಸಬೇಕಾಗುತ್ತದೆ.
ಆದರೆ ಅಸಲಿಯತ್ತೇನೆಂದರೆ ಯರವಾಡಾ ಜೈಲಿನಲ್ಲಿ ನೇಣಿನ ಕುಣಿಕೆಯನ್ನು ಅತ್ಯಂತ ನಿಖರತೆಯಿಂದ, ಯಾವುದೇ ಭಾವನೆಯಿಲ್ಲದ, ಮಾನಸಿಕವಾಗಿ ಸ್ಥಿರತೆಯುಳ್ಳ ಮತ್ತು ಗಟ್ಟಿ ಗುಂಡಿಗೆಯುಳ್ಳ ವ್ಯಕ್ತಿಯೇ ಇಲ್ಲ. ಇದ್ದ ಕೊಟ್ಟ ಕೊನೆಯ ವ್ಯಕ್ತಿ 1995ರಲ್ಲಿ ನಿವೃತ್ತರಾಗಿದ್ದಾರೆ. ಬೇರೆ ಜೈಲುಗಳಲ್ಲಿ ನೇಣು ಹಾಕುವ ಕೆಲಸ ಮಾಡುತ್ತಿದ್ದ ಕೆಲವರು ಸಾವನ್ನಪ್ಪಿದ್ದಾರೆ ಮತ್ತು ಕೆಲವರು ನಿವೃತ್ತರಾಗಿದ್ದಾರೆ. ಇಂಥ ಕಾರ್ಯ ಮಾಡಲು ದೇಶದಲ್ಲಿ ಯಾರೂ ಮುಂದು ಬರುತ್ತಿಲ್ಲ.
ಇದೇ ಜೈಲಿನಲ್ಲಿ ರಾಷ್ಟ್ರಪತಿಯಿಂದ ಕ್ಷಮಾದಾನ ತಿರಸ್ಕೃತರಾದ ಹನ್ನೊಂದು ಅಪರಾಧಿಗಳು ಕುಣಿಕೆಗೆ ಕುತ್ತಿಗೆಯೊಡ್ಡಿ ನಿಂತಿದ್ದಾರೆ. ಕಸಬ್ ಹನ್ನಡನೆಯವನು. ಆ ಹನ್ನೊಂದು ಜನರಿಗೇ ಗಲ್ಲು ಶಿಕ್ಷೆಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಇನ್ನು ಕಸಬ್ ಗೆ ಯಾವಾಗಲೋ?
ಪಶ್ಚಿಮ ಬಂಗಾಳದಲ್ಲಿ 2004ರಲ್ಲಿ ಮಗುವನ್ನು ಬಲಾತ್ಕರಿಸಿ ಹತ್ಯೆಗೈದಿದ್ದ ಧನಂಜೊಯ್ ಚಟರ್ಜಿ ಎಂಬುವವನನ್ನು ಗಲ್ಲಿಗೇರಿಸಿದ್ದೇ ಕೊನೆ. ಆತನನ್ನು ಗಲ್ಲಿಗೇರಿಸಿದ್ದ 87 ವರ್ಷದ ನಾತಾ ಮುಲಿಕ್ ಎಂಬುವವರು ಈಗಿಲ್ಲ. ಅವರ ತಂದೆ ಕೂಡ ಬ್ರಿಟಿಷರ ಕಾಲದಲ್ಲಿ ನೇಣಿಗೇರಿಸುವ ಕೆಲಸ ಮಾಡುತ್ತಿದ್ದರೆ. 2009ರಲ್ಲಿ ಕೊನೆಯುಸಿರೆಳೆದ ಮುಲಿಕ್ ತನ್ನ ಮೊಮ್ಮಗನಿಗೆ ಕೊಲ್ಕತಾದ ಅಲಿಪೂರ್ ಜೈಲಿನಲ್ಲಿ ಕೆಲಸ ಕೊಡಿಸಿದ್ದಾರಾದರೂ ಅವರು ನೇಣು ಹಾಕುವ ಕೆಲಸಕ್ಕೆ ಒಪ್ಪುತ್ತಿಲ್ಲ.
ಗಲ್ಲಿಗೇರಿಸುವವರಿಗಾಗಿ ಅರ್ಜಿ ಕರೆಯಲಾಗಿದೆ ಆದರೆ ಯಾರೂ ಮುಂದುಬರುತ್ತಿಲ್ಲ. ಗಲ್ಲಿಗೇರಿಸುವಾಗ ಬೇರೆ ವಿಚಾರ ಮಾಡದ, ಮನಸು ಸ್ಥಿರವಿರುವ, ಗಟ್ಟಿ ಗುಂಡಿಗೆಯುಳ್ಳ ಯಾರಾದರೂ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಯಾರಾದರೂ ಮುಂದೆ ಬರದಿದ್ದಲ್ಲಿ ಜೈಲು ಸೂಪರಿಂಟೆಂಟ್ ಅವರಿಗೆ ತಾವೇ ಸ್ವತಃ ನೇಣು ಹಾಕುವ ಅಧಿಕಾರವಿದೆ. ಆದರೆ, ಯಾವ ಸೂಪರಿಟೆಂಟ್ ಕೂಡ ಇಂಥ ಕೆಲಸಕ್ಕೆ ಕೈಹಾಕದಿರುವುದು ವಿಪರ್ಯಾಸದ ಸಂಗತಿ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications