ಹಾಲಪ್ಪ ತಪ್ಪು ಮಾಡಿಲ್ಲ : ಯಡಿಯೂರಪ್ಪ

ಹಾಲಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿ ಮಾತಿನಲ್ಲೂ ಸಚಿವ ಹಾಲಪ್ಪ ಅವರನ್ನು ಸಮರ್ಥಿಸಿಕೊಳ್ಳುವ ಮಾತನ್ನು ಯಡಿಯೂರಪ್ಪ ಅವರು ಆಡಿದರು. ಇಂದು ಬೆಳಗ್ಗೆ 7.30ರ ಸುಮಾರಿಗೆ ಹಾಲಪ್ಪ ಅವರು ನನಗೆ ಫೋನ್ ಮಾಡಿ ರಾಜೀನಾಮೆ ನೀಡುವುದಾಗಿ ಹೇಳಿದರು. ಆದರೆ, ನಾನು ದುಡುಕಬೇಡಿ. ತನಿಖೆ ನಡೆಯಲಿ, ಮುಂದಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಪರಿಶೀಲನೆ ನಡೆಸೋಣ ಎಂದು ಹೇಳಿದೆ.
ಆದರೆ, ಅವರು 8.30 ಸುಮಾರಿಗೆ ಅವರು ರಾಜೀನಾಮೆ ಘೋಷಿಸುವುದಾಗಿ ಮಾಧ್ಯಮ ಮುಖಾಂತರ ತಿಳಿದು ಬಂದಿತು. ಹಾಲಪ್ಪ ಅವರು ನಿಷ್ಠಾವಂತ ವ್ಯಕ್ತಿ. ಆತನ ಬಗ್ಗೆ ಸಂಪೂರ್ಣ ನಂಬಿಕೆ ನನಗಿದೆ. ಆರೋಪದಿಂದ ಹೊರಬರಲಿದ್ದಾರೆ. ಅದನ್ನು ನಾವು ನೀವು ಕಾದು ನೋಡೋಣ ಎಂದು ಯಡಿಯೂರಪ್ಪ ವಿವರಿಸಿದರು. ಹಾಲಪ್ಪ ಅವರ ಖಾತೆಯನ್ನು ಹೆಚ್ಚುವರಿಯಾಗಿ ಆರ್ ಅಶೋಕ್ ಅವರಿಗೆ ವಹಿಸಲಾಗಿದೆ ಎಂದು ಸಿಎಂ ಹೇಳಿದರು.












Click it and Unblock the Notifications