Get Updates
Get notified of breaking news, exclusive insights, and must-see stories!

ಮಳೆ ಅವಘಡಕ್ಕೆ 24/7 ನಿಯಂತ್ರಣ ಕೊಠಡಿ

BBMP logo
ಬೆಂಗಳೂರು, ಏ. 20 : ಇನ್ನು ಕೆಲವೇ ವಾರಗಳಲ್ಲಿ ಮುಂಗಾರು ಮಳೆ ಕರ್ನಾಟಕಕ್ಕೆ ಅಪ್ಪಳಿಸಲಿದ್ದು ಜನವಸತಿ ಸ್ಥಳಗಳಲ್ಲಿ ಮಳೆ ನೀರಿನಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆ ವಹಿಸಲು ಜಿಲ್ಲಾಡಳಿತಗಳು ಸಿದ್ಧವಾಗಬೇಕಾಗಿದೆ.

ಮಳೆ ಬಂದರೆ ಬೆಂಗಳೂರು ಬೆಂಗಳೂರಾಗಿರುವುದಿಲ್ಲ ಎನ್ನುವ ಸಂಗತಿ ಅನೇಕ ವರ್ಷಗಳಿಂದ ಮನದಟ್ಟಾಗಿದೆ. ಕೆರೆ ನೀರು ಹರವಿನ ಜಾಗಗಳಲ್ಲಿ ಕಟ್ಟಡಗಳು ಎದ್ದಿರುವುದು, ಮಳೆ ನೀರು ಸಾಗಿಸುವ ಕಾಲುವೆಗಳಲ್ಲಿ ಕಸ ತುಂಬಿರುವುದು, ನೀರಿನ ರಭಸ ತಡೆಯದ ಸಣ್ಣಸಣ್ಣ ಚರಂಡಿಗಳು ಬೆಂಗಳೂರಿನ ಶತೃಗಳು. ಇದನ್ನು ಮನಗಂಡಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಡಳಿತ ಈ ಬಾರಿ ಮಳೆ ಹಾವಳಿಯಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಲು ಕೆಲವು ಕ್ರಮಗಳನ್ನು ಕೈಗೊಂಡಿದೆ.

ನಗರ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆ ಸಂಭವಿಸಿದಾಗ ಪ್ರವಾಹ, ನೀರು ನುಗ್ಗುವುದು ಮುಂತಾದ ಮಳೆ ಸಂಬಂಧಿತ ಅವಗಢಗಳು ಸಂಭವಿಸಿದಾಗ ಸಾರ್ವಜನಿಕರಿಗೆ ನೇರವಾಗಿ ನೆರವಾಗಲು ಮತ್ತು ಬಿಬಿಎಂಪಿ ಸಿಬ್ಬಂದಿಗೆ ಸಹಾಯ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತನ್ನ ನಾಲ್ಕು ವಿಭಾಗೀಯ ಕಚೇರಿಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ನಿಯಂತ್ರಣ ಕೊಠಡಿ ಸ್ಥಾಪಿಸಿದೆ.

ಈ ಕೊಠಡಿಯ ನಿರ್ವಹಣೆಯನ್ನು ಅಭಿಯಂತರ ಅಧಿಕಾರಿಗಳಿಗೆ ವಹಿಸಲಾಗಿದೆ. ಪ್ರತಿದಿನವೂ ಅಧಿಕಾರಿಯೊಬ್ಬರು ಸಾರ್ವಜನಿಕರ ಕರೆಗಳನ್ನು ಸ್ವೀಕರಿಸಿ ಪ್ರಾಧಿಕಾರದ ವ್ಯಾಪ್ತಿಯ ಪ್ರದೇಶಗಳಲ್ಲಿ ಹಾನಿಯಾಗಿದ್ದರೆ ತಕ್ಷಣ ಕ್ರಮ ಕೈಗೊಳ್ಳಲಿದ್ದಾರೆ. ಅಲ್ಲದೆ, ಬಿಬಿಎಂಪಿ ನಿಯಂತ್ರಣ ಕೊಠಡಿಗೆ ಸಿಬ್ಬಂದಿಗಳೊಡನೆ ಸಂಪರ್ಕವಿರಿಸಿಕೊಂಡು ಅಗತ್ಯವಾದ ಕೊಠಡಿಗಳನ್ನು ಸಜ್ಜುಗೊಳಿಸಿದೆ.

ಪ್ರತಿಯೊಂದು ನಿಯಂತ್ರಣ ಕೊಠಡಿಗೆ ತಲಾ ಪಾಳಿಯಲ್ಲಿ ಕಾರ್ಯನಿರ್ವಹಿಸಲು ಹತ್ತು ಜನ ಸಿಬ್ಬಂದಿ, ಒಂದು ಜೆಸಿಬಿ, ಒಂದು ಟ್ರಾಕ್ಟರ್, ಒಂದು ಡಿಸೇಲ್ ಪಂಪ್ ಸೆಟ್ ಹಾಗೂ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಗತ್ಯ ಸಾಮಾಗ್ರಿಗಳನ್ನು ನೀಡಲಾಗಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಸೂಕ್ಷ್ಮ ಸ್ಥಳಗಳನ್ನು ಗುರುತಿಸಲಾಗಿದ್ದು, ಅಂಥ ಪ್ರದೇಶಗಳಲ್ಲಿ ನೀರು ಸರಾಗವಾಗಿ ಹರಿಯಲು ಅನುಕೂಲವಾಗುವಂಥ ಕಾಮಗಾರಿಗಳನ್ನು ಭರದಿಂದ ಕೈಗೆತ್ತಿಕೊಳ್ಳಲು ಆಯುಕ್ತರು ಸೂಚಿಸಿದ್ದಾರೆ.

ನಿಯಂತ್ರಣ ಕೊಠಡಿಗಳ ಉಸ್ತುವಾರಿ ಅಧಿಕಾರಿಗಳು ಮತ್ತು ಅಧೀನ ಅಧಿಕಾರಿಗಳ ಹಾಗೂ ಅವರುಗಳ ದೂರವಾಣಿ ಸಂಖ್ಯೆ ಕೆಳಗಿನಂತಿದೆ.

ಪೂರ್ವ ವಿಭಾಗ

ರಾಘವನ್, ಅಭಿಯಂತರ ಅಧಿಕಾರಿ, 98456 30128
ರಾಜಶೇಖರ್, ಕಾರ್ಯಪಾಲಕ ಅಭಿಯಂತರರು, 98807 30449, 080-25720264 (ಕಚೇರಿ)

ಪಶ್ಚಿಮ ವಿಭಾಗ

ಸಂಜೀವ ವಿ ಮರಡ್ಡಿ, ಅಭಿಯಂತರ ಅಧಿಕಾರಿ, 98456 30116
ಸಿದ್ಧರಾಜು, ಕಾರ್ಯಪಾಲಕ ಅಭಿಯಂತರು, 98456 30111, 080-23381479(ಕಚೇರಿ)

ಉತ್ತರ ವಿಭಾಗ

ಎ ಎನ್ ತ್ಯಾಗರಾಜ್, ಅಭಿಯಂತರ ಅಧಿಕಾರಿ, 98456 30115
ಸುಬ್ರಮಣ್ಯ, ಕಾರ್ಯಪಾಲಕ ಅಭಿಯಂತರರು, 99456 04475, 080-23333479(ಕಚೇರಿ)

ದಕ್ಷಿಣ ವಿಭಾಗ

ಎ ಎನ್ ತ್ಯಾಗರಾಜ್, ಅಭಿಯಂತರ ಅಧಿಕಾರಿ, 98456 30115
ಶ್ರೀನಿವಾಸ್ ರಾವ್, ಕಾರ್ಯಪಾಲಕ ಅಭಿಯಂತರರು, 99456 04475, 080-26712949 (ಕಚೇರಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+