ಮೈಸೂರಿನ ಬಸ್ಸಲ್ಲಿ ರಸ್ತೆ ಮಾರ್ಗದರ್ಶಿ ಜಿಪಿಎಸ್

ನಗರದಲ್ಲಿರುವ ಬಸ್ ನಿಲ್ದಾಣಗಳ ವೀಕ್ಷಣೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಈ ಸುದ್ದಿಯನ್ನು ಸಾರಿಗೆ ಸಚಿವ ಆರ್ ಅಶೋಕ್ ಹಂಚಿಕೊಂಡರು. ಈ ಯೋಜನೆಗಾಗಿ ವಿಶ್ವ ಬ್ಯಾಂಕ್ 21 ಕೋಟಿ ರು. ಹಣಕಾಸನ್ನು ಒದಗಿಸಲಿದೆ ಎಂದು ಅವರು ತಿಳಿಸಿದರು.
ಜೆಎನ್ ನರ್ಮ್ ಯೋಜನೆಯಲ್ಲಿ ನೀಡಲಾಗಿದ್ದ ಹಣವನ್ನು ರಾಜ್ಯ ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿದೆ. ರಾಜ್ಯದ ಸಾರಿಗೆಯನ್ನು ಮಾದರಿಯಾಗಿಟ್ಟುಕೊಂಡು ಕಾರ್ಯ ನಿರ್ವಹಿಸಬೇಕೆಂದು ಕೇಂದ್ರ ಸರಕಾರ ಕೂಡ ಇತರ ರಾಜ್ಯಗಳಿಗೆ ಹೇಳಿದೆ. ರಾಜಸ್ತಾನ ಸರಕಾರ ರಾಜ್ಯದ ಸಾರಿಗೆ ಅಧಿಕಾರಿಗಳನ್ನು ತನ್ನ ರಾಜ್ಯಕ್ಕೆ ಆಹ್ವಾನಿಸಿದೆ ಎಂದು ಅವರು ಹೇಳಿದರು.
ಜಿಪಿಎಸ್ ಎಂಬ ರಸ್ತೆ ಮಾತುಗಾರನ ಬಗ್ಗೆ ಇನ್ನಷ್ಟು ತಿಳಿಯಿರಿ.












Click it and Unblock the Notifications