ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಬಿಎಂಪಿ ಚುನಾವಣೆ : ಸರಕಾರಕ್ಕೆ ಕಪಾಳಮೋಕ್ಷ
ಚುನಾವಣೆ ನಡೆಸುವಂತೆ ಕೋರಿ ಮಾಜಿ ಮೇಯರ್ ಪಿ ರಮೇಶ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಹಾಗೂ ಕಾಲಾವಕಾಶ ಕೋರಿ ಸರಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಗೋಪಾಲಗೌಡ ಹಾಗೂ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರ ಪೀಠ ಈ ಆದೇಶ ನೀಡಿದೆ. ಮಾ.30ರೊಳಗೆ ಚುನಾವಣೆ ನಡೆಸಬೇಕು ಎಂದು ಫೆ 21 ರಂದು ಇದೇ ಪೀಠ ನೀಡಿದ್ದ ಆದೇಶವನ್ನು ತೀರ್ಪು ಎತ್ತಿ ಹಿಡಿದಿದೆ. ಈ ಸಂಬಂಧ ಹಲವು ಬಾರಿ ಸರಕಾರ ತರಾಟೆಗೆ ಒಳಗಾಗಿತ್ತು.
ಚುನಾವಣೆ ಸಂಬಂಧ ಹೈಕೋರ್ಟ್ ನ ತೀರ್ಪಿಗೆ ಸರಕಾರದ ನಿರ್ಲಕ್ಷ್ಯ ಮತ್ತು ನಡೆದುಕೊಂಡ ರೀತಿಗೆ ಪೀಠ ಛೀಮಾರಿ ಹಾಕಿದೆ. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಅವರ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಪೀಠ ತರಾಟೆಗೆ ತೆಗೆದುಕೊಂಡಿತು.
Comments
yediyurappa ಬೆಂಗಳೂರು ಯಡಿಯೂರಪ್ಪ bangalore supreme court high court ಸುಪ್ರಿಂಕೋರ್ಟ್ ಹೈಕೋರ್ಟ್ ಬಿಬಿಎಂಪಿ ಚುನಾವಣೆ bbmp polls
Story first published: Tuesday, March 2, 2010, 11:04 [IST]