ವಿರುಪಾಪುರಗಡ್ಡೆಯಲ್ಲಿ ಪುಣೆ ಸ್ಫೋಟದ ಉಗ್ರರು!

Pune blasts: Four taken into custody in Hampi
ಹಂಪಿ, ಫೆ. 17 : ಪುಣೆ ಸ್ಫೋಟಕ್ಕೆ ಸಂಬಂಧಿಸಿದಂತೆ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಉಗ್ರ ಉಡುಪಿ ಮೂಲದ ರಿಯಾಜ್ ಭಟ್ಕಳ ಮತ್ತು ಆತನ ಸಹೋದರ ಹೋಮಿಯೋಪತಿ ವೈದ್ಯ ಇಕ್ಬಾಲ್ ಕೈವಾಡ ದಟ್ಟವಾಗುತ್ತಿರುವ ಬೆನ್ನಲ್ಲೇ ಕೊಪ್ಪಳ ಜಿಲ್ಲೆಯ ವಿರುಪಾಪುರ ಗಡ್ಡೆಯಲ್ಲಿ ನಾಲ್ಕು ಕಾಶ್ಮೀರಿ ಮೂಲದ ವ್ಯಕ್ತಿಗಳನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಅಗತ್ಯ ಮಾಹಿತಿ ಮೇರೆಗೆ ಕೊಪ್ಪಳ ಜಿಲ್ಲೆಯ ವೀರಾಪುರ ಗಡ್ಡೆಗೆ ಆಗಮಿಸಿದ ಪುಣೆ ಪೊಲೀಸರ ತಂಡ ನಾಲ್ಕು ಜನರನ್ನು ವಶಕ್ಕೆ ತೆಗೆದುಕೊಂಡಿದೆ. ಈ ನಾಲ್ಕು ಕಾಶ್ಮೀರಿಗಳು ವೀರಾಪುರ ಗಡ್ಡೆಯಲ್ಲಿ ಕರಕುಶಲ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ತೊಡಗಿದ್ದರು. ಇನ್ನೂ ಮೂರು ಜನರು ಪುಣೆ ಸ್ಫೋಟ ಘಟನೆಯಲ್ಲಿ ಪಾಲ್ಗೊಂಡಿರುವ ಬಗ್ಗೆ ಸಂಶಯವಿದೆ. ಅವರ ಬಂಧನಕ್ಕೂ ಪೊಲೀಸರು ಜಾಲಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ ಶನಿವಾರ ನಡೆದ ಪುಣೆ ಸ್ಟೋಟದಲ್ಲಿ 11 ಮಂದಿ ಮೃತಪಟ್ಟಿದ್ದು, 45 ಮಂದಿ ಗಾಯಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+