ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗೋಹತ್ಯೆ ನಿಷೇಧ ಬೇಡ, ದೇವೇಗೌಡ
ಪಕ್ಷದ ಕಚೇರಿಯಲ್ಲಿ ಮಾಧ್ಯಮದ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗೋಹತ್ಯೆ ನಿಷೇಧದಂತ ಕೆಲಸಕ್ಕೆ ಸರಕಾರ ಕೈಹಾಕಬಾರದು. ಇದೊಂದು ಅಪಾಯಕಾರಿ ನಿರ್ಧಾರ. ಸರಕಾರ ಆತುರದ ನಿರ್ಧಾರ ತೆಗೆದುಕೊಳ್ಳಬಾರದು. ಇದರಿಂದ ಚರ್ಮೋಧ್ಯಮಕ್ಕೂ ಹೊಡೆತ ಬೀಳಲಿದೆ ಎಂದು ದೇವೇಗೌಡ ಹೇಳಿಕೆ ನೀಡಿದ್ದಾರೆ.
ತನ್ನ ಸಂಖ್ಯಾಬಲದಿಂದ ಬಿಜೆಪಿ ಈ ಕಾಯ್ದೆ ಜಾರಿಗೆ ತಂದರೂ ರಾಜ್ಯಪಾಲ ಭಾರದ್ವಾಜ್ ಅವರು ಈ ವಿವಾದಕಾರಿ ಕಾಯ್ದೆಗೆ ಅಂಕಿತ ಹಾಕಬಾರದೆಂದು ಅವರು ಆಗ್ರಹಿಸಿದ್ದಾರೆ. 'ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಜಾನುವಾರು ಸಂರಕ್ಷಣೆ' ಮಸೂದೆ ತಿದ್ದುಪಡಿ ವಿಧೇಯಕ್ಕೆ ರಾಜ್ಯ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿತ್ತು.
Comments
bjp ದೇವೇಗೌಡ ಬಿಜೆಪಿ yediyurappa ಯಡಿಯೂರಪ್ಪ deve gowda ವಿಎಸ್ ಆಚಾರ್ಯ cow slaughter vs acharya ಕಸಾಯಿಖಾನೆ ನಿಷೇಧ ಗೋಹತ್ಯೆ
Story first published: Thursday, February 11, 2010, 16:08 [IST]