ಎತ್ತಿಗೆ ಜ್ವರ, ಎಮ್ಮೆಗೆ ಬರೆ ಹಾಕಿದ ಗೌಡರು!

ವೈದ್ಯಕೀಯ ಶಿಕ್ಷಣ ಸಚಿವ ರಾಮಚಂದ್ರೇಗೌಡ ಪ್ರತಿಭಟನಾಕಾರರ ಮೇಲಿನ ಕೋಪವನ್ನ ಎಸ್ಕಾರ್ಟ್ ಮಾಡುತ್ತಿದ್ದ ಪಿ.ಎಸ್.ಐ ನಾಗೇಶ್ರವರ ಸಸ್ಪೆಂಡ್ ಮಾಡುವಂತೆ ಹಿರಿಯಾಧಿಕಾರಿಗಳ ಮೇಲೆ ಒತ್ತಡ ತಂದು ಯಶಸ್ವಿಯಾಗಿದ್ದಾರೆ. ಬಿಜೆಪಿ ಸರ್ಕಾರದ ಸಚಿವ ರಾಮಚಂದ್ರೇಗೌಡರು ಹೋರಾಟಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ನಿಷ್ಠಾವಂತ ಪೋಲೀಸ್ ಅಧಿಕಾರಿಗಳನ್ನ ತಲೆದಂಡ ಮಾಡುವ ಮೂಲಕ ಅಪ್ರಜ್ಞಾವಂತಿಕೆ ಪ್ರದರ್ಶನ ಮಾಡುತ್ತಿದ್ದಾರೆಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ರೀ.. ರಾಮಚಂದ್ರೇಗೌಡರು ಕರೆಂಟ್ ಇದ್ದಾಗೆ ಮುಟ್ಟುದ್ರೆ ಕರೆಂಟ್ ಹೋಡೀತಾರೆ ಹುಷಾರಪ್ಪ ಅಂತ ಹೇಳಿದ್ದೇ ಆದ್ರೂ ಎಡವಟ್ಟಾಗೋಯ್ತು, ಆಗಿದ್ದಾಗೋಯ್ತು ಪಿ.ಎಸ್.ಐ ನಾಗೇಶ್ರವರ ಸಸ್ಪೆನ್ಶನ್ ಬೇಡ ಸರ್ ಅಂತ ಹೇಳಿದೆ... ಹೇಳಿದಾಕ್ಷಣ ಕೆಂಡಾಮಂಡಲರಾದ ಸಚಿವ ರಾಮಚಂದ್ರೇಗೌಡರು ಏಯ್....ಇಡೋ ಫೋನ್ ಅಂತ ಹೇಳಿ ಫೋನ್ ಕಟ್ ಮಾಡುದ್ರು" ಅಂತ ಬಿಜೆಪಿ ಮುಖಂಡ ಕೆ.ಎಸ್.ಐ.ಸಿ ಅಧ್ಯಕ್ಷ ಸಿ.ಪಿ.ಯೋಗೀಶ್ವರ್ ಅವರು ರಾಮಚಂದ್ರೇಗೌಡರ ರೌದ್ರಾವತಾರದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ವ್ಯಂಗ್ಯವಾಗಿ ವರ್ಣಿಸಿದರು.
ನಿನ್ನೆ ನಡೆದ ಸರ್ಕಾರಿ ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಚಿವರ ಕಾರಿನೆದುರು ಕ.ರ.ವೇ ಕಾರ್ಯಕರ್ತರು ಕಪ್ಪುಬಾವುಟ ಪ್ರದರ್ಶನ ನಡೆಸಿದ್ದಕ್ಕೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗೇಶ್ ತಲೆದಂಡವಾಗಿದ್ದರ ಬಗ್ಗೆ ಮಾತನಾಡುತ್ತಾ ಸಚಿವರ ಮನೋಭಾವವನ್ನು ಪತ್ರಕರ್ತರಿಗೆ ಯೋಗೀಶ್ವರ್ ತಿಳಿಸಿದ್ದ ಪರಿ ಈ ರೀತಿಯಲ್ಲಿತ್ತು. ಸ್ವತಃ ಬಿಜೆಪಿ ಮುಖಂಡರಾದ ಯೋಗೀಶ್ವರ್ರವರೇ ಸಚಿವ ರಾಮಚಂದ್ರೇಗೌಡರ ನಡವಳಿಕೆಯನ್ನ ವ್ಯಂಗ್ಯವಾಗಿ ವ್ಯಾಖ್ಯಾನಿಸಿದರು. ಸಚಿವರ ಕೋಪ ಒಂದೆಡೆ ಮುಖಂಡರ ವ್ಯಂಗ್ಯ ಇನ್ನೊಂದೆಡೆ ಆದರೆ ಸಾಮಾನ್ಯ ಅಧಿಕಾರಿಗಳು ಮಾತ್ರ ಬಲಿಪಶುವಾಗುತ್ತಿರುವುದರಿಂದ ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣಸಂಕಟ ಎನ್ನುವಂತಾಗಿದೆ.
ಈ ನಡುವೆ ರಾಮನಗರ ಕಾರಾಗೃಹದಲ್ಲಿರುವ ಕ.ರ.ವೇ ಕಾರ್ಯಕರ್ತರನ್ನ ಕ.ರ.ವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಭೇಟಿ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಪರ ಹೋರಾಟಗಾರರನ್ನ ನಿರ್ಲಕ್ಷ್ಯ ಮಾಡಿದ ಗುಂಡೂರಾವ್ ಮತ್ತು ರಾಮಕೃಷ್ಣ ಹೆಗಡೆ ಸರ್ಕಾರ ಪತನವಾಯಿತು. ಈಗಲೂ ಕನ್ನಡಪರ ಹೋರಾಟಗಾರರನ್ನ ವಿರೋಧಿಸುತ್ತಿರುವ ಕೂಡ ಯಡಿಯೂರಪ್ಪನವರ ಸರ್ಕಾರ ಕೂಡ ಪತನವಾಗುವುದು ನಿಶ್ಚಿತವಾಗಿದೆ ಎಂದು ನಾರಾಯಣಗೌಡ ಹೇಳಿದರು.
ಚನ್ನಪಟ್ಟಣದ ಪಿ.ಎಸ್.ಐ ನಾಗೇಶ್ರವರ ಅಮಾನತಿಗೆ ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದಾರೆ. ಇದೇ ರೀತಿ ಬಿಜೆಪಿ ಸರ್ಕಾರದ ಸಚಿವರುಗಳು ದಬ್ಬಾಳಿಕೆ ಪ್ರದರ್ಶಿಸುವುದನ್ನು ಬಿಡಬೇಕು. ಇಲ್ಲದಿದ್ದರೆ ಜಯಕರ್ನಾಟಕ ಸಂಘಟನೆ ಕೂಡ ಸರ್ಕಾರದ ವಿರುದ್ದ ಹೋರಾಟ ಮಾಡುವುದೆಂದು ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಎಚ್ಚರಿಸಿದ್ದಾರೆ.
ಕಳೆದ ತಿಂಗಳಷ್ಟೆ ಅತ್ಯುತ್ತಮ ಪೋಲೀಸ್ ಅಧಿಕಾರಿ ಎಂದು ಜಿಲ್ಲಾಡಳಿತ ಪಿ.ಎಸ್.ಐ ನಾಗೇಶ್ರವರನ್ನ ಗುರುತಿಸಿತ್ತು. ಆದರೆ ಸರ್ಕಾರದ ಸಚಿವರ ಕೆಂಗಣ್ಣಿಗೆ ಗುರಿಯಾದ ಪಿ.ಎಸ್.ಐ ಅನಗತ್ಯವಾಗಿ ಮಾಡದ ತಪ್ಪಿಗೆ ಕರ್ತವ್ಯ ಲೋಪವೆಂಬ ಆರೋಪ ಹೊತ್ತಿಕೊಂಡು ಅಮಾನತ್ತು ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಎದುರಾಗಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications