ನೂರ್ ಫಾತೀಮಾಗೆ (ಅಶ್ವಿನಿ) ಜಯ!

ಯುವತಿ ಅಶ್ವಿನಿ ಅಲಿಯಾಸ್ ನೂರ್ ಫಾತೀಮಾ (21) ಹಾಗೂ ಯುವಕ ಇರ್ಫಾನ್ ಪ್ರೇಮ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ನವೆಂಬರ್ 4 ರಂದು ನಾಪತ್ತೆಯಾಗಿರುವ ಮಗಳನ್ನು ಹಾಜರುಪಡಿಸುವಂತೆ ಕೋರಿ ಆಕೆಯ ತಂದೆ ವೈ ಎಸ್ ಶ್ರೀನಿವಾಸ ಅವರು ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ ಶ್ರೀಧರಮೂರ್ತಿ ಹಾಗೂ ಸುಭಾಷ್ ಆದಿ ಅವರನ್ನು ಒಳಗೊಂಡ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಯುವತಿ ವಯಸ್ಕಳಾಗಿದ್ದು, ಯುವಕನನ್ನು ಪ್ರೀತಿಸಿ ಸ್ವಇಚ್ಛೆಯಿಂದ ಮದುವೆಯಾಗಿದ್ದಾಳೆ. ಆದ್ದರಿಂದ ಇದು ಅಪ್ಪಟ ಪ್ರೀತಿ. ಲವ್ ಜಿಹಾದ್ ಅಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಕೋರ್ಟ್ ಈ ಹಿಂದೆ ನೀಡಿದ್ದ ಆದೇಶದ ಮೇರೆಗೆ ಯುವತಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಮುಸ್ಲಿಂ ಧರ್ಮದಂತೆ ಬುರ್ಖಾ ಧರಿಸಿ ಬಂದಿದ್ದ ಯುವತಿ, ನಾನು ಸ್ವಇಚ್ಛೆಯಿಂದ ಇರ್ಫಾನನನ್ನು ಎರಡು ತಿಂಗಳ ಹಿಂದೆ ಮದುವೆಯಾಗಿದ್ದೇನೆ. ನಮ್ಮಬ್ಬಿರ ಪ್ರೇಮಕ್ಕೆ ನನ್ನ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನಾನು ಮನೆ ಬಿಟ್ಟು ಹೋಗಿ ಆತನನ್ನು ವಿವಾಹವಾಗಿದ್ದೇನೆ ಎಂದು ನೂರು ಫಾತೀಮಾ ಸ್ಪಷ್ಟಪಡಿಸಿದರು. ಶಿವಮೊಗ್ಗದ ಈ ಪ್ರೇಮಿಗಳಿಗೆ ಬೆಂಬಲ ನೀಡುತ್ತಾ ಬಂದಿದ್ದ ಪತ್ರಕರ್ತ ರವಿ ಬೆಳಗೆರೆ ಹೈ ಕೋರ್ಟ್ ನಲ್ಲಿ ವಿಚಾರಣೆ ಪೂರ್ಣಗೊಳ್ಳುವವರೆಗೂ ಇದ್ದು, ಕೋರ್ಟ್ ತೀರ್ಪು ಆಲಿಸಿ, ಹರ್ಷ ವ್ಯಕ್ತಪಡಿಸಿದರು.












Click it and Unblock the Notifications