ನೈಸ್ ಗೆ ಇಂಚು ಭೂಮಿ ಕೊಡಲ್ಲ, ಯಡಿಯೂರಪ್ಪ
ಬೆಂಗಳೂರು,
ಜ. 12 : ನೈಸ್ ಗೆ ಒಂದು ಇಂಚು ಹೆಚ್ಚುವರಿ ಭೂಮಿ ನೀಡುವ ಉದ್ದೇಶ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಈ ವಿಷಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಕಲ್ಪಿಸಿಕೊಂಡು ಮಾತನಾಡುತ್ತಿದ್ದಾರೆ. ಅವರಿಗೆ ವಾಸ್ತವದ ಅರಿವಿಲ್ಲ. ರೈತರ ಪರ ತಾವು ಮತ್ತು ತಮ್ಮ ಸರಕಾರವಿದೆ ಎಂದು ಅವರು ಹೇಳಿದರು. id="toptextpromo">ಇಂದು
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ನಾವು ಅಧಿಕಾರಕ್ಕೆ ಬಂದ ಮೇಲೆ ಗೊಟ್ಟಿಗೆರೆ ಬಳಿ 3.1 ಎಕರೆ ಭೂಮಿಯನ್ನು ಮಾತ್ರ ನೈಸ್ ಗೆ ನೀಡಿದ್ದೇವೆ. ಈವರೆಗೆ ನೈಸ್ ಗೆ ರಸ್ತೆ ನಿರ್ಮಿಸಲು 5,144 ಎಕರೆ ಭೂಮಿ ನೀಡಲಾಗಿದೆ. ಇದರಲ್ಲಿ 2,152 ಎಕರೆ ಖಾಸಗಿಯವರದು. ಇದನ್ನು ಕಾನೂನು ತಜ್ಞರ ಸಲಹೆ ಮೇರೆಗೆ ಹಿಂದಿನ ಸರಕಾರವೇ ನೈಸ್ ಗೆ ನೀಡಿದೆ. ಪರಿಹಾರವನ್ನೂ ಹಿಂದಿನ ಸರಕಾರವೇ ತೀರ್ಮಾನಿಸಿದೆ. ಈ ಯೋಜನೆಗೆ ಸಹಿ ಮಾಡಿದವರೇ ಇದೇ ದೇವೇಗೌಡ ಎಂದರು. id='are-slot-1' class='oiad oi-axt oiadv'> id='top-searched-articles'>ಸುಪ್ರಿಂಕೋರ್ಟ್
ನೀಡಿರುವ ಆದೇಶಕ್ಕೆ ಅನುಗುಣವಾಗಿ ನೈಸ್ ಸಂಸ್ಥೆಗೆ 20,193 ಎಕರೆ ಭೂಮಿಯನ್ನು ನೀಡಬೇಕಾಗಿದೆ. ಮೂಲ ಒಪ್ಪಂದಕ್ಕೆ ಅನುಗುಣವಾಗಿಯೇ ಭೂಮಿ ನೀಡಲಾಗುತ್ತಿದೆ ವಿನಃ ಹೆಚ್ಚುವರಿ ಒಂದು ಇಂಚು ಭೂಮಿಯನ್ನು ನೈಸ್ ಗೆ ನೀಡುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications