ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಕ್ಕೆ ಬಿ ಸಿ ರಾಯ್ ಫುಟ್ ಬಾಲ್ ಟ್ರೋಫಿ
ಎರಡೂ ತಂಡಗಳು ಪ್ರಥಮಾರ್ಥದಲ್ಲಿ ಸಮಬಲವಾಗಿ ಹೋರಾಡಿ ಯಾವ ಫಲವೂ ದೊರೆಯಲಿಲ್ಲ. ದ್ವಿತಿಯಾರ್ಧದಲ್ಲಿ ಆಟದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿದ ಕರ್ನಾಟಕ ತಂಡ 50 ನಿಮಿಷದಲ್ಲಿ ವಿನೋದ್ ಕುಮಾರ್ ಪ್ರಥಮ ಗೋಲು ಹೊಡೆದರು. ಕರ್ನಾಟಕ ತನ್ನ ವಿಜಯದ ದಾಖಲೆ ಗಟ್ಟಿ ಮಾಡುತ್ತಿದ್ದಂತೆಯೇ 63 ನೇ ನಂಬರ್ ನಲ್ಲಿ ಕರ್ನಾಟಕ ತಂಡದ ಕ್ಯಾಪ್ಟನ್ ಶಂಕರ್ ತಮಗೆ ದೊರೆತ ಪೆನಾಲ್ಟಿ ಸದುಪಯೋಗಪಡಿಸಿಕೊಂಡು ಮತ್ತೊಂದು ಗೋಲು ಹೊಡೆದರು. ಇದರೊಂದಿಗೆ ಅತಿಥೇಯ ತಂಡ 2004 ರಲ್ಲಿ ಗೆದ್ದಿದ್ದ ಟ್ರೋಫಿಯನ್ನು ಮತ್ತೆ ತನ್ನದಾಗಿಸಿಕೊಂಡಿತು.
Comments
Story first published: Monday, January 11, 2010, 12:44 [IST]