ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣ ದೇವರಾಯನ ವೆಬ್ ಸೈಟ್ ಆರಂಭ

|
Google Oneindia Kannada News

Law Minister Sureshkumar
ಬೆಂಗಳೂರು, ಜ. 8 : ವಿಜಯನಗರದ ಅರಸ ಶ್ರೀ ಕೃಷ್ಣದೇವರಾಯ ಪಟ್ಟಾಭಿಷೇಕ ಮಹೋತ್ಸವದ 500ನೇ ವರ್ಷದ ಆಚರಣೆಯ ಅಂಗವಾಗಿ ಸಮಿತಿ ರೂಪಿಸಿರುವ ವೆಬ್ ಸೈಟ್ ನ್ನು ನಗರಾಭಿವೃದ್ಧಿ ಮತ್ತ ಕಾನೂನು ಸಚಿವ ಎಸ್ ಸುರೇಶಕುಮಾರ್ ಅನಾವರಣ ಮಾಡಿದರು.

ಈ ವೆಬ್ ಸೈಟ್ ಯುನಿಕೋಡ್ ತಂತ್ರಾಶದಲ್ಲಿ ಇದು ತಯಾರಾಗಿದೆ. ಈ ಅಂತರ್ಜಾಲದಲ್ಲಿ ಪದಗಳ ಹುಡುಕಾಟವನ್ನು ಕನ್ನಡದಲ್ಲಿ ಗೂಗಲ್ ಸಹಾಯದಲ್ಲಿ ಮಾಡಬಹುದಾಗಿದೆ. ಈ ವೆಬ್ ಸೈಟ್ ನಲ್ಲಿ ಬ್ಲಾಗ್ ವ್ಯವಸ್ಥೆಯೂ ಇದ್ದು, ಸಾರ್ವಜನಿಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.

ಈ ವೆಬ್ ಸೈಟ್ ನಲ್ಲಿ ಕೃಷ್ಣದೇವರಾಯನ ವೈಯಕ್ತಿಕ, ಕೌಟುಂಬಿಕ ಹಾಗೂ ಆತನ ಆಡಳಿತ ವ್ಯವಸ್ಥೆಯ ಬಗ್ಗೆ ವಿವರಗಳಿವೆ. ವಾರ್ಷಿಕೋತ್ಸವದ ಅಂಗವಾಗಿ ನಡೆಯುತ್ತಿರುವ ಕಾರ್ಯಕ್ರಮಗಳ ಸಂಪೂರ್ಣ ವರದಿಗಳಿವೆ. ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿಜಯನಗರದ ವೈಭವವನ್ನು ಪರಿಚಯಿಸುವ ನಿಟ್ಟಿನಲ್ಲಿ ಉಚಿತ ಪ್ರವಾಸ ನಡೆಸಲಾಗುತ್ತದೆ. ಕೃಷ್ಣದೇವರಾಯ ಗೌರವಾರ್ಥ ಅಂಚೆ ಚೀಟಿ, ನಾಣ್ಯ ಬಿಡುಗಡೆ ಮಾಡಲಾಗುತ್ತದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X