ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಣಕೋಣದಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಿಲ್ಲ
ಸಾರ್ವಜನಿಕರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ಥಾವರ ನಿರ್ಮಿಸುವ ನಿರ್ಧಾರ ಕೈ ಬಿಡಲಾಗಿದೆ. ಬದಲಾಗಿ ರೆಸಾರ್ಟ್, ಮೆಡಿಕಲ್ ಕಾಲೇಜು ಹಾಗೂ ಎಂಜಿನಿಯರಿಂಗ್ ಕಾಲೇಜು ನಿರ್ಮಾಣಕ್ಕೆ ಕಂಪನಿ ಆಸಕ್ತಿ ತೋರಿದೆ. ಈ ಸಂಬಂಧ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಸ್ಥಾವರ ನಿರ್ಮಾಣ ಹಿನ್ನೆಲೆಯಲ್ಲಿ ದಾಖಲಿಸಿದ ಪ್ರಕರಣಗಳನ್ನು ವಾಪಸ್ ಪಡೆಯಲಾಗುವುದು ಎಂದು ಘೋಷಿಸಿದರು.
ಕೇಂದ್ರ ಸರಕಾರಕ್ಕೆ ತಪ್ಪು ಮಾಹಿತಿ ನೀಡಿ ಸ್ಥಾವರ ನಿರ್ಮಾ ಣಕ್ಕೆ ಪರವಾನಗಿ ಪಡೆದಿಲ್ಲ ತಪ್ಪು ಮಾಹಿತಿ ನೀಡಿದವರು ನಾವಲ್ಲ, ಅರಣ್ಯ ಇಲಾಖೆ. ಪರಿಸರ ಸಚಿವಾಲಯ ಪರವಾನಗಿ ನೀಡುವಾಗ ಅರಣ್ಯ ಇಲಾಖೆ ವರದಿ ಯನ್ನು ಪರಿಗಣಿಸುತ್ತದೆಯೇ ವಿನಾ ನಮ್ಮ ವರದಿಯನ್ನಲ್ಲ' ಎಂದರು. ಹಣಕೋಣ ಉಷ್ಣ ವಿದ್ಯುತ್ ಸ್ಥಾವರ ವಿರೋಧಿ ಹೋರಾಟಗಾರರ ಮೇಲೆ ಜು. 30 ರಂದು ನಡೆದ ಪೊಲೀಸ್ ದೌರ್ಜನ್ಯಕ್ಕೂ ತಮ್ಮ ಕಂಪನಿಗೂ ಸಂಬಂಧವಿಲ್ಲ. ತಮ್ಮ ಉದ್ದೇಶ ಇಲ್ಲಿ ಉಷ್ಣ ಸ್ಥಾವರ ಸ್ಥಾಪಿಸುವುದಾಗಿತ್ತೇ ಹೊರತು ಯಾರ ಮೇಲೂ ದೌರ್ಜನ್ಯ ಮಾಡುವುದಾಗಿರಲಿಲ್ಲ ಎಂದು ಅವರು ತಿಳಿಸಿದರು.
Comments
Story first published: Sunday, January 3, 2010, 14:57 [IST]