ದೇವೇಗೌಡ, ಸಿದ್ದು ನೀತಿಗೆಟ್ಟ ರಾಜಕಾರಣಿಗಳು
ಬಳ್ಳಾರಿ,
ಡಿ. 20 : ನೀತಿ ಬಿಟ್ಟು ರಾಜಕೀಯ ಮಾಡುವವರು ಅಧಿಕಾರಕ್ಕಾಗಿ ನಾನಾ ತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಆರೋಪಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಅಹಿಂದ ಕಟ್ಟಿದ ಕಾರಣಕ್ಕಾಗಿಯೇ ಸಿದ್ಧರಾಮಯ್ಯ ಅವರನ್ನು ಪದಚ್ಯುತಿಗೊಳಿಸಿದ ದೇವೇಗೌಡ, ಇದೀಗ ಮತ್ತೆ ಸಿದ್ಧುಗೆ ಪಟ್ಟ ಕಟ್ಟಲು ತಯಾರಾಗಿರುವುದು ಏಕೆ ? ಇದೆಲ್ಲಾ ನೀತಿಗೆಟ್ಟ ರಾಜಕಾರಣಿಗಳು ಮಾಡುವ ಕೆಲಸ. ಅಧಿಕಾರದಲ್ಲಿರದವರು ಸಿಎಂ ಕನಸು ಕಾಣುವುದು ಸಹಜ ಎಂದು ರೆಡ್ಡಿ ವ್ಯಂಗ್ಯವಾಡಿದರು. id='are-slot-1' class='oiad oi-axt oiadv'> id='top-searched-articles'>ಸದ್ಯ
ಯಾವುದೇ ಆಪರೇಷನ್ ಕಮಲ ಮಾಡುವ ಅನಿವಾರ್ಯತೆ ಸರಕಾರಕ್ಕಿಲ್ಲ. ರಾಜ್ಯ ಸರಕಾರ ಸದೃಡವಾಗಿದ್ದು, ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದರು.











Click it and Unblock the Notifications