ದೇವೇಗೌಡ, ಸಿದ್ದು ನೀತಿಗೆಟ್ಟ ರಾಜಕಾರಣಿಗಳು

Janardhan Reddy
ಬಳ್ಳಾರಿ, ಡಿ. 20 : ನೀತಿ ಬಿಟ್ಟು ರಾಜಕೀಯ ಮಾಡುವವರು ಅಧಿಕಾರಕ್ಕಾಗಿ ನಾನಾ ತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಜನಾರ್ದನರೆಡ್ಡಿ ಆರೋಪಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಅಹಿಂದ ಕಟ್ಟಿದ ಕಾರಣಕ್ಕಾಗಿಯೇ ಸಿದ್ಧರಾಮಯ್ಯ ಅವರನ್ನು ಪದಚ್ಯುತಿಗೊಳಿಸಿದ ದೇವೇಗೌಡ, ಇದೀಗ ಮತ್ತೆ ಸಿದ್ಧುಗೆ ಪಟ್ಟ ಕಟ್ಟಲು ತಯಾರಾಗಿರುವುದು ಏಕೆ ? ಇದೆಲ್ಲಾ ನೀತಿಗೆಟ್ಟ ರಾಜಕಾರಣಿಗಳು ಮಾಡುವ ಕೆಲಸ. ಅಧಿಕಾರದಲ್ಲಿರದವರು ಸಿಎಂ ಕನಸು ಕಾಣುವುದು ಸಹಜ ಎಂದು ರೆಡ್ಡಿ ವ್ಯಂಗ್ಯವಾಡಿದರು.

ಸದ್ಯ ಯಾವುದೇ ಆಪರೇಷನ್ ಕಮಲ ಮಾಡುವ ಅನಿವಾರ್ಯತೆ ಸರಕಾರಕ್ಕಿಲ್ಲ. ರಾಜ್ಯ ಸರಕಾರ ಸದೃಡವಾಗಿದ್ದು, ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+