ದೇವೇಗೌಡ, ಸಿದ್ದು ನೀತಿಗೆಟ್ಟ ರಾಜಕಾರಣಿಗಳು

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಅಹಿಂದ ಕಟ್ಟಿದ ಕಾರಣಕ್ಕಾಗಿಯೇ ಸಿದ್ಧರಾಮಯ್ಯ ಅವರನ್ನು ಪದಚ್ಯುತಿಗೊಳಿಸಿದ ದೇವೇಗೌಡ, ಇದೀಗ ಮತ್ತೆ ಸಿದ್ಧುಗೆ ಪಟ್ಟ ಕಟ್ಟಲು ತಯಾರಾಗಿರುವುದು ಏಕೆ ? ಇದೆಲ್ಲಾ ನೀತಿಗೆಟ್ಟ ರಾಜಕಾರಣಿಗಳು ಮಾಡುವ ಕೆಲಸ. ಅಧಿಕಾರದಲ್ಲಿರದವರು ಸಿಎಂ ಕನಸು ಕಾಣುವುದು ಸಹಜ ಎಂದು ರೆಡ್ಡಿ ವ್ಯಂಗ್ಯವಾಡಿದರು.
ಸದ್ಯ ಯಾವುದೇ ಆಪರೇಷನ್ ಕಮಲ ಮಾಡುವ ಅನಿವಾರ್ಯತೆ ಸರಕಾರಕ್ಕಿಲ್ಲ. ರಾಜ್ಯ ಸರಕಾರ ಸದೃಡವಾಗಿದ್ದು, ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ರೆಡ್ಡಿ ಸ್ಪಷ್ಟಪಡಿಸಿದರು.












Click it and Unblock the Notifications