ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನಿಗಳಿಂದ ಆತ್ಮಹತ್ಯಾ ದಾಳಿ, ಕಟ್ಟೆಚ್ಚರ

By Staff
|
Google Oneindia Kannada News

File photo: Terrorists held
ನವದೆಹಲಿ, ಡಿ 14 : ತಾಲಿಬಾನ್ ಉಗ್ರ ಸಂಘಟನೆಯಿಂದ ತರಬೇತಿ ಪಡೆದ ಭಯೋತ್ಪಾದಕರು ದೇಶದೊಳಗೆ ನುಸುಳಿದ್ದಾರೆಂದು ಶಂಕಿಸಲಾಗಿದ್ದು ದೆಹಲಿ, ಕೊಲ್ಕತ್ತಾ, ಮುಂಬೈ ಮತ್ತು ಗುಜರಾತ್ ನಲ್ಲಿ ವಿಧ್ವಂಸಕ ಕೃತ್ಯವೆಸಗುವ ಸಾಧ್ಯತೆಗಳಿವೆ ಎಂದು ಕೇಂದ್ರ ಗೃಹ ಸಚಿವಾಲಾಯ ಕಟ್ಟೆಚ್ಚರ ರವಾನಿಸಿದೆ.

ಈ ಉಗ್ರರು ಈಗಾಗಲೇ ದೇಶದೊಳಗೆ ನುಸುಳಿದ್ದು ತಾಲಿಬಾನ್ ನಿಂದ ಕಠಿಣ ತರಬೇತಿ ಪಡೆದಿದ್ದಾರೆ ಮತ್ತು ಪ್ರಮುಖ ನಗರಗಳಲ್ಲಿ ಆತ್ಮಹತ್ಯಾ ಬಾಂಬ್ ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಪ್ರಮುಖ ಸ್ಥಳಗಳಿಗೆ ಭಾರಿ ಭದ್ರತೆ ನೀಡುವಂತೆ ಆಯಾಯ ರಾಜ್ಯಗಳಿಗೆ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ. ಮೆಟ್ರೋಪಾಲಿಟನ್ ನಗರಗಳಾದ ಮುಂಬೈ, ದೆಹಲಿ ಮತ್ತು ಕೊಲ್ಕತ್ತಾ ನಗರಗಳಿಗೆ ಹೈಅಲರ್ಟ್ ಘೋಷಿಸಲಾಗಿದೆ.

ವಿಮಾನ ನಿಲ್ದಾಣ, ಮುಂಬೈ ಷೇರು ಮಾರುಕಟ್ಟೆ, ಆರೆಸ್ಸೆಸ್ ಹಾಗೂ ಶಿವಸೇನಾ ಪ್ರಧಾನ ಕಾರ್ಯಾಲಯ, ಕೋಲ್ಕತ್ತಾದಲ್ಲಿರುವ ಅಮೇರಿಕನ್ ದೂತಾವಾಸ ಕಚೇರಿ ಮುಂತಾದ ಪ್ರಮುಖ ಸ್ಥಳಗಳಿಗೆ ಬಿಗಿ ಭದ್ರತೆ ನೀಡುವಂತೆ ಗೃಹ ಖಾತೆ ಆದೇಶಿಸಿದೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X