ಇವತ್ತಿನ ಚಿನ್ನದ ಬೆಲೆ ತಿಂಗಳ ಸಂಬಳ!

ಬೆಲೆ ಏರಿಕೆ ತಲೆನೋವಾಗಿದ್ದರೂ ಮದುವೆ ಯಾರಪ್ಪನ ಮನೇದು. ಬೆಳ್ಳಿಕಾಲುಂಗುರದ ಜತೆಗೆ ಕನಿಷ್ಠ ತಾಳಿ, ಒಂದು ಜತೆ ಓಲೆ, ಮೂಗುತಿ ಬೇಕಲ್ಲ. ಮದುವೆ ಮಾತ್ರವಲ್ಲ, ಕೌಟುಂಬಿಕ ಮಂಗಳ ಕಾರ್ಯಕ್ರಮಗಳಲ್ಲಿ ಭರದಲ್ಲಿ ಚಿನ್ನದ ಕೊಡುಕೊಳ್ಳುವಿಕೆ ಹೆಚ್ಚಾಗಿದ್ದು, ಬಂಗಾರದ ಬೆಲೆ ಗಗನಕ್ಕೇರಿದರೂ ಮಾರಾಟ ಗತಿ ಮಾತ್ರ ಇಳಿಕೆ ಕಂಡಿಲ್ಲ. ಇದೇ ಕಾರಣದಿಂದಾಗಿ ಬೆಲೆ 18,400 ರುಪಾಯಿ ಆಗಿದೆ. ತಿಂಗಳ ಪಗಾರ ಪೂರ್ತಿ ಕೊಟ್ಟರೂ ಒಂದು ಉಂಗುರ ಕೊಳ್ಳುವುದು ತ್ರಾಸ ಅದ.
ಬೆಲೆ ಏರಿಕೆಗಳ ಈ ಯುಗದಲ್ಲಿ ಮನುಷ್ಯನ ಬೆಲೆ ಬಿಟ್ಟು ಇನ್ಯಾವುದಕ್ಕೂ ಬೆಲೆ ಕಡಿಮೆ ಆಗುವುದಿಲ್ಲ ಎನ್ನುವುದು ನಮಗೂ ಖಾತ್ರಿ, ನಿಮಗೂ ಖಾತ್ರಿ. ಬೆಲೆ ಕಡಿಮೆಯಾಗಿದೆ ಒಂದು ಕೆಜಿ ಕೊಳ್ಳುವ ಕಡೆ ಎರಡು ಕೆಜಿ ಕೊಂಡೆ ಎಂಬ ಯಾವುದಾದರೂ ಉದಾಹರಣೆ ಇದ್ದರೆ ನಮಗೆ ತಿಳಿಸಿ. ಬಂಗಾರದ ಬೆಲೆ ಕೇಳಿದಾಕ್ಷಣ ಜನಸಾಮಾನ್ಯರ ಪ್ರತಿಕ್ರಿಯೆ ಹೇಗಿರುತ್ತದೆ ಎಂದರೆ, 'ಆಯ್ಯೋ ಬಿಡ್ರಿ ನಾವೆಲ್ಲಿ ತಗೋಳ್ಳೋಣಾ, ಎಷ್ಟಾದರೂ ಆಗ್ಲಿ ಬಿಡಿ' ಎಂಬ ಧ್ವನಿಯಲ್ಲಿ ಹೇಳುತ್ತಾರೆ. ಆದರೆ, ನಾಳೆ ಪ್ರಿಯತಮೆಗೆ ಉಂಗುರ ಅಥವಾ ಮಗಳ ಮದುವೆಗೆ ತಾಳಿ ಖರೀದಿಸುವ ಆಲೋಚನೆ ಬಂದು ಬೆಚ್ಚಿ ಬೀಳುತ್ತಾರೆ.
ಈ ಮಧ್ಯೆ, ನಮ್ಮ ರಾಜಾಪೇಟೆ ಸ್ನೇಹಿತ ವೀರಾಚಾರಿ ಹೇಳುವ ಪ್ರಕಾರ, ಬಂಗಾರದ ಬೆಲೆ ಇಳಿಯುವ ಯಾವ ಲಕ್ಷಣಗಳೂ ಸದ್ಯಕ್ಕೆ ಕಾಣಿಸುತ್ತಿಲ್ಲ. ಜಾಗತಿಕ ಆರ್ಥಿಕ ಬಿಕ್ಕಟ್ಟು, ಮಾರುಕಟ್ಟೆ ಕುಸಿತ, ಉದ್ಯೋಗ ನಷ್ಟ, ಜತೆಗೆ ಉರಿಯುವ ಬೆಂಕಿಗೆ ತುಪ್ಪ ಸುರಿದ ದುಬೈ ಆರ್ಥಿಕ ಕುಸಿತಗಳಿಂದ ಮಾರುಕಟ್ಟೆ ಚೇತರಿಸಿಕೊಳ್ಳುವವರಿಗೆ ಚಿನ್ನದ ಬೆಲೆ ಇಳಿಯುವುದಿಲ್ಲ. ತಾತ್ಪಾರ್ಯವೆಂದರೆ ಕೊಳ್ಳುವುದು ಕಷ್ಟ, ಮಾರುವುದು ಅನಿವಾರ್ಯ. ಈ ಎಲ್ಲದರ ಪರಿಣಾಮ, ಜಾಗತಿಕ ಮಟ್ಟದಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಇದೆ. ಇದು ಇದೇ ರೀತಿ ಮುಂದುವರೆದರೆ, ಮುಂದಿನ ನಾಲ್ಕು ವರ್ಷಗಳಲ್ಲಿ ಬಂಗಾರದ ಬೆಲೆ 10 ಗ್ರಾಮ್ ಗೆ ರು. 30 ಸಾವಿರವಾದರೆ ಆಶ್ಚರ್ಯವಿಲ್ಲ.
ನೀತಿ : ಬಂಗಾರದೊಡವೆ ಬೇಕೇ ನೀರೇ, ಎಂದು ಹಾಡುವ ಹಾಗಿಲ್ಲ. ನಿರಾಭರಣ ಸುಂದರಿಯರಿಗಿದು ಕಾಲವಯ್ಯ.
(ಏಜನ್ಸೀಸ್)
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications