ಕನಸಿನಲ್ಲೂ ಪಿಎಂ ಆಗುವೆ ಎಂದುಕೊಂಡಿರಲಿಲ್ಲ
ಅಮೆರಿಕ ಪ್ರವಾಸದಲ್ಲಿರುವ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ನಾನು ಈ ಹಂತಕ್ಕೆ ತಲುಪುತ್ತೇನೆ ಎಂದು ಯೋಚಿಸಿರಲಿಲ್ಲ. ನಾನು ಇಂದು ಈ ಹಂತಕ್ಕೆ ಮುಟ್ಟಿದ್ದರಲ್ಲಿ ನಾನು ಪಡೆದ ಶಿಕ್ಷಣದ ಪಾಲೂ ಇದೆ ಎಂದರು. ಆದರೆ, ನನ್ನಂತಹ ಹಿನ್ನೆಲೆಯ ವ್ಯಕ್ತಿಯೊಬ್ಬರು ಇಷ್ಟು ದೊಡ್ಡ ಗಣತಂತ್ರದ ಪ್ರಧಾನಿಯಾಗುವುದಕ್ಕೆ ಪ್ರಜಾಪ್ರಭುತ್ವವೇ ಕಾರಣ ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ನಾನು ಆಕಸ್ಮಿಕ ರಾಜಕಾರಣಿ, ಎರಡನೇ ಬಾರಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮನಮೋಹನ್ ಸಿಂಗ್ ಮಾಧ್ಯಮ ಮುಂದೆ ಆಡಿದ ಮೊದಲ ಮಾತಿದು. ವೃತ್ತಪರ ರಾಜಕಾರಣಿಗೂ ನನಗೂ ಅಜಗಜಾಂತರ ವ್ಯತ್ಯಾಸವಿದೆ. ಒಬ್ಬ ವೃತ್ತಪರ ರಾಜಕಾರಣಿಯ ಹಾಗೆ ವಾಗ್ದಾಳಿ ನಡೆಸುವುದು ನನಗೆ ಬರುವುದಿಲ್ಲ ಎಂದು ಲೋಕಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕ ಅಡ್ವಾಣಿ ಟೀಕೆಗೆ ಪ್ರತಿಕ್ರಿಯಿಸಿದ ರೀತಿಯಿದು. ಅಡ್ವಾಣಿ ಅವರು, ಭಾರತ ಕಂಡ ಬಲಹೀನ ಪ್ರಧಾನಿ ವಿರುದ್ಧ ಎಂದು ನೇರ ವಾಗ್ದಾಳಿ ನಡೆಸಿದ್ದರು. ನಂತರ ಫಲಿತಾಂಶ ಬಂದಿತು. ಏನಾಯಿತು ಎನ್ನುವುದು ಇದೀಗ ಇತಿಹಾಸದ ಪುಟದಲ್ಲಿ ದಾಖಲಾಗಿದೆ.
(ಏಜನ್ಸೀಸ್)