ಮೆಜೆಸ್ಟಿಕ್ : ಇನ್ನುಆರು ತಿಂಗಳು ಸ್ಥಳಾಂತರವಿಲ್ಲ

ಮೆಟ್ರೋ ಕಾಮಗಾರಿ ಹಂತಹಂತವಾಗಿ ನಡೆಯಲಿದೆ. ಮೋದಲ ಹಂತವಾಗಿ ಕೆಎಸ್ಆರ್ ಟಿಸಿ ಎರಡು ಡಿಪೋಗಳ ಅಧೀನದಲ್ಲಿರುವ ಜಾಗ ಮಾತ್ರ ಬಳಕೆಯಾಗಲಿದೆ. ಇದರಿಂದ ಬಸ್ ಸಂಚಾರದಲ್ಲಿ ವ್ಯತ್ಯಯ ಆಗುವುದಿಲ್ಲ. ಎರಡನೇ ಹಂತದಲ್ಲಿ ಕೆಲ ಬಸ್ ಗಳನ್ನು ನಿಲ್ದಾಣದಿಂದ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದು ಶನಿವಾರ ತಿಳಿಸಿದರು.
ಮೊದಲ ಹಂತ ಪೂರ್ಣಗೊಂಡ ನಂತರ ಒಟ್ಟು ಆಚರಣೆ ಆಗುತ್ತಿರುವ 2,700 ಬಸ್ ಗಳಲ್ಲಿ ಶಾಂತಿನಗರ, ಬಾಳೆಕಾಯಿ ಮಂಡಿ, ಯಶವಂತಪುರ, ಬೈಯಪ್ಪನಹಳ್ಳಿಗೆ ಸ್ಥಳಾಂತರಗೊಳ್ಳಲಿವೆ. ಉಳಿದ 1,600 ಬಸ್ ಗಳ ಕಾರ್ಯಚರಣೆ ಕೇಂದ್ರ ನಿಲ್ದಾಣದಿಂದಲೇ ನಡೆಯಲಿದೆ ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications