ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋರ್ ಕಮೀಟಿಯಲ್ಲಿ ಬಲಾಢ್ಯರ ಬಿಕ್ಕಟ್ಟು

By Staff
|
Google Oneindia Kannada News

Basavaraja Bommai
ಬೆಂಗಳೂರು, ನ. 18 : ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯುವ ಕೋರ್ ಕಮೀಟಿಯಲ್ಲೇ ಬಿಕ್ಕಟ್ಟು ಉಂಟಾಗಿದೆ. ಕೋರ್ ಕಮೀಟಿಯಲ್ಲಿ ಬಸವರಾಜ ಬೊಮ್ಮಾಯಿ ಅವರ ಹೆಸರು ಇರುವುದು ಈ ಬಿಕ್ಕಟ್ಟಿಗೆ ಕಾರಣವಾಗಿದೆ. ಬೊಮ್ಮಾಯಿ ಅವರನ್ನು ಕೋರ್ ಕಮೀಟಿ ಪಟ್ಟಿಯಿಂದ ಕೈಬಿಡುವಂತೆ ರೆಡ್ಡಿಗಳು ಮತ್ತವರ ಬೆಂಬಲಿಗರು ಹೈಕಮಾಂಡ್ ಗೆ ದೂರು ಸಲ್ಲಿಸುವ ಸಾಧ್ಯತೆ ಇದೆ.

ಇನ್ನೊಂದಡೆ ಕೋರ್ ಕಮೀಟಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಅನ್ಯಾಯವಾಗಿದೆ. ಸಮನ್ವಯ ಸಮಿತಿ ಬಲಾಢ್ಯರ ಸಮಿತಿಯಾಗಿ ಹೊರಹೊಮ್ಮಿದೆ. ಹಿಂದುಳಿದ ವರ್ಗಗಳ ನಾಯಕರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ ಎಂದು ಬಿಜೆಪಿಯ ಹಿಂದುಳಿದ ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಕೋರ್ ಕಮೀಟಿಯಲ್ಲಿ 14 ಮಂದಿ ಸದಸ್ಯರಿದ್ದು, ಅದರಲ್ಲಿ 6 ಮಂದಿ ಬ್ರಾಹ್ಮಣರು, 3 ಮಂದಿ ಲಿಂಗಾಯಿತರು, 2 ಮಂದಿ ಒಕ್ಕಲಿಗರು, 2 ಹಿಂದುಳಿದ ವರ್ಗಗಳು ಮತ್ತು ಕರಣಾಕರರೆಡ್ಡಿ ಸಮನ್ವಯ ಸಮಿತಿಯಲ್ಲಿದ್ದಾರೆ. ಇದು ಹಿಂದುಳಿದ ವರ್ಗಗಳ ಶಾಸಕರಿಗೆ ಕಣ್ಣು ಕೆಂಪಗಾಗುವಂತೆ ಮಾಡಿದೆ.

ಕೋರ್ ಕಮೀಟಿಯಲ್ಲಿ ತೆಗೆದುಕೊಳ್ಳುವ ತೀರ್ಮಾನಕ್ಕೆ ತಾವು ಬದ್ಧ. ರಾಜ್ಯದ ಹಿತ ಮತ್ತು ಅಭಿವೃದ್ಧಿಗಾಗಿ ಕೋರ್ ಕಮೀಟಿಯ ನಿರ್ಧಾರವನ್ನು ಸ್ವಾಗತಿಸುವುದಾಗಿ ಸಚಿವ ಜನಾರ್ದನರೆಡ್ಡಿ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X