ಗುಲ್ಬರ್ಗಾದಲ್ಲಿ ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ
ಗುಲ್ಬರ್ಗಾ, ನ. 10 : ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ ಒಂದು ವಿನೂತನ ಯೋಜನೆಯನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ ಹಾಗೂ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಗುಲ್ಬರ್ಗಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾರಂಭಿಸಲಾಗಿದೆ.
ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ ನಿರ್ಮಾಣ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾದ ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಈ ಉದ್ಯಾನವನವನ್ನು 8 ನೇ, ಜುಲೈ 2009 ರಂದು ಉದ್ಘಾಟಿಸಲಾಯಿತು, ಈಗ ಅಲ್ಲಿ ಅನೇಕ ಚಟುವಟಿಕೆಗಳು ಕೈಗೊಳ್ಳಲಾಗಿದೆ. ಐದು ವಿವಿಧ ರೀತಿಯ ಜೈವಿಕ ಇಂಧನ ಸಸ್ಯಗಳಾದ ಜತ್ರೋಪ್, ಹಿಪ್ಪೆ, ಹೋಂಗೆ, ಸಿಮಾರೂಬ್, ಔಡಲ, ಸಸ್ಯಗಳನ್ನು ಸುಮಾರು 30 ಎಕರೆ ಭೂಮಿಯಲ್ಲಿ ಮಾದರಿ ಪ್ರಯೋಗಿಕ ಉದ್ಯಾನವನವಾಗಿ ನಿರ್ಮಿಸಲಾಗಿದೆ.
ವಿಶ್ವವಿದ್ಯಾಲಯು ಜೈವಿಕ ಇಂಧನ ಸಸ್ಯಗಳ ಬೆಳವಣಿಗೆ, ಉತ್ಪಾದನೆ, ರೋಗ ನಿರೋಧಕ ಶಕ್ತಿ, ಬೃಹತ ಪ್ರಮಾಣದಲ್ಲಿ ಬೆಳೆಯುವಿಕೆ ಮತ್ತು ಮಾರುಕಟ್ಟೆ ಅಭಿವೃದ್ಧಿ ಪಡೆಸುವ ಪ್ರಯೋಗಗಳಲ್ಲಿ ತೊಡಗಿದೆ. ರಾಷ್ಟ್ರಿಯ ಪ್ರಯೋಗಾಲಯಗಳು ಮತ್ತು ಖಾಸಗಿ ಉದ್ಯಮಿಗಳ ಜೋತೆ ಸಂಪರ್ಕ ಬೆಳೆಸಲಾಗುತ್ತಿದೆ. ರಾಷ್ಟ್ರಿಯ ಮತ್ತು ರಾಜ್ಯ ಸರಕಾರಿ ಸಂಸ್ಥೆಗಳಿಂದ ಧಾನ ಸಹಾಯಕಾಗಿ ಕೋರಲಾಗಿದೆ.
ಡಾ. ಆರವಿಂದ ದುಗ್ಗಾಲ, ಸಲಹೆಗಾರರು, ಜೈವಿಕ ತಂತ್ರಜ್ಞಾನ ವಿಭಾಗ ಭಾರತ ಸರಕಾರ ಅವರು ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನನ್ನು ಈ ಮೊದಲು ಭೇಟಿ ನಿಡಿದ್ದಾರೆ. ಜೈವಿಕ ತಂತ್ರಜ್ಞಾನ ವಿಭಾಗ ಭಾರತ ಸರಕಾರ ಅವರಿಂದ ಧಾನ ಸಹಾಯ ಪಡೆಯುವ ನಿರಿಕ್ಷೆಯಲ್ಲಿದೆ. ಅದೆ ರೀತಿ ಜೈವಿಕ ಇಂಧನ ಉತ್ಪಾದನೆ ಮಾಡುವ ಉದ್ಯಮಗಳ (ಉದಾ: ಪ್ರಾಜ ಉದ್ಯಮ ಪೂಣೆ, ನಂದನ್ ಬೈಯೋಮ್ಯಾಟ್ರಕ್ಸ್, ಹೈದ್ರಾಬಾದ್ ಮತ್ತು ಲ್ಯಾಬಲ್ಯಾಂಡ್ ಬೈಯೋಟೆಕ್, ಮೈಸೂರು) ಜೊತೆ ಸಂಪರ್ಕ ಹೊಂದಿ ಜೈವಿಕ ಇಂಧನ ತಯಾರಿಕೆ ಘಟಕ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಲು ತಿರ್ಮಾನಿಸಲಾಗಿದೆ.
ಇನ್ನು ಮುಂದೆ ಅಸಕ್ತಿಯಿರುವ ರೈತರು, ಸಂಸ್ಥೆಗಳು ತಮಲ್ಲಿರುವ ಒಣ ಜತ್ರೋಪ್ ಬಿಜಗಳನ್ನು ಮಾರಲು ಹೆಚ್ಚಿನ ಮಾಹಿತಿಗಾಗಿ ಪ್ರೋ. ಜಿ. ಆರ್. ನಾಯಕ, ಸಂಯೋಜಕರು, ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ ಅವರಿಗೆ ಸಂಪರ್ಕಿಸಬಹುದು. ಜೈವಿಕ ಇಂಧನ ಸಸ್ಯಗಳ ಪ್ರಸಿದ್ಧಿ ಪಡೆಸಿ ಅದರಿಂದ ಅದಾಯ ಸೃಷ್ಟಿಸಿ ಗ್ರಾಮಿಣ ಪ್ರದೇಶದಲ್ಲಿ ಹೊಸ ಉದ್ಯೋಗ ಇದೊಂದು ಸುವರ್ಣ ಅವಕಾಶ ಮತ್ತು ಮಹತ್ವದ ಮೈಲುಗಲ್ಲಾಗಿದೆ. ಈ ಕಾರ್ಯಕ್ರಮವು ದಿನಾಂಕ 10 ರಂದು ಬೆಳಿಗ್ಗೆ 10 ಗಂಟೆಗೆ ಹೆದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯಲಯದಲ್ಲಿ ಜರುಗಲಿದೆ.
(ದಟ್ಸ್ ಕನ್ನಡ ವಾರ್ತೆ)
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications