ಗುಲ್ಬರ್ಗಾದಲ್ಲಿ ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ
ಗುಲ್ಬರ್ಗಾ, ನ. 10 : ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ ಒಂದು ವಿನೂತನ ಯೋಜನೆಯನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ ಹಾಗೂ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ, ಗುಲ್ಬರ್ಗಾ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಾರಂಭಿಸಲಾಗಿದೆ.
ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ ನಿರ್ಮಾಣ ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾದ ಒಂದು ಮಹತ್ವದ ಕಾರ್ಯಕ್ರಮವಾಗಿದೆ. ಈ ಉದ್ಯಾನವನವನ್ನು 8 ನೇ, ಜುಲೈ 2009 ರಂದು ಉದ್ಘಾಟಿಸಲಾಯಿತು, ಈಗ ಅಲ್ಲಿ ಅನೇಕ ಚಟುವಟಿಕೆಗಳು ಕೈಗೊಳ್ಳಲಾಗಿದೆ. ಐದು ವಿವಿಧ ರೀತಿಯ ಜೈವಿಕ ಇಂಧನ ಸಸ್ಯಗಳಾದ ಜತ್ರೋಪ್, ಹಿಪ್ಪೆ, ಹೋಂಗೆ, ಸಿಮಾರೂಬ್, ಔಡಲ, ಸಸ್ಯಗಳನ್ನು ಸುಮಾರು 30 ಎಕರೆ ಭೂಮಿಯಲ್ಲಿ ಮಾದರಿ ಪ್ರಯೋಗಿಕ ಉದ್ಯಾನವನವಾಗಿ ನಿರ್ಮಿಸಲಾಗಿದೆ.
ವಿಶ್ವವಿದ್ಯಾಲಯು ಜೈವಿಕ ಇಂಧನ ಸಸ್ಯಗಳ ಬೆಳವಣಿಗೆ, ಉತ್ಪಾದನೆ, ರೋಗ ನಿರೋಧಕ ಶಕ್ತಿ, ಬೃಹತ ಪ್ರಮಾಣದಲ್ಲಿ ಬೆಳೆಯುವಿಕೆ ಮತ್ತು ಮಾರುಕಟ್ಟೆ ಅಭಿವೃದ್ಧಿ ಪಡೆಸುವ ಪ್ರಯೋಗಗಳಲ್ಲಿ ತೊಡಗಿದೆ. ರಾಷ್ಟ್ರಿಯ ಪ್ರಯೋಗಾಲಯಗಳು ಮತ್ತು ಖಾಸಗಿ ಉದ್ಯಮಿಗಳ ಜೋತೆ ಸಂಪರ್ಕ ಬೆಳೆಸಲಾಗುತ್ತಿದೆ. ರಾಷ್ಟ್ರಿಯ ಮತ್ತು ರಾಜ್ಯ ಸರಕಾರಿ ಸಂಸ್ಥೆಗಳಿಂದ ಧಾನ ಸಹಾಯಕಾಗಿ ಕೋರಲಾಗಿದೆ.
ಡಾ. ಆರವಿಂದ ದುಗ್ಗಾಲ, ಸಲಹೆಗಾರರು, ಜೈವಿಕ ತಂತ್ರಜ್ಞಾನ ವಿಭಾಗ ಭಾರತ ಸರಕಾರ ಅವರು ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನನ್ನು ಈ ಮೊದಲು ಭೇಟಿ ನಿಡಿದ್ದಾರೆ. ಜೈವಿಕ ತಂತ್ರಜ್ಞಾನ ವಿಭಾಗ ಭಾರತ ಸರಕಾರ ಅವರಿಂದ ಧಾನ ಸಹಾಯ ಪಡೆಯುವ ನಿರಿಕ್ಷೆಯಲ್ಲಿದೆ. ಅದೆ ರೀತಿ ಜೈವಿಕ ಇಂಧನ ಉತ್ಪಾದನೆ ಮಾಡುವ ಉದ್ಯಮಗಳ (ಉದಾ: ಪ್ರಾಜ ಉದ್ಯಮ ಪೂಣೆ, ನಂದನ್ ಬೈಯೋಮ್ಯಾಟ್ರಕ್ಸ್, ಹೈದ್ರಾಬಾದ್ ಮತ್ತು ಲ್ಯಾಬಲ್ಯಾಂಡ್ ಬೈಯೋಟೆಕ್, ಮೈಸೂರು) ಜೊತೆ ಸಂಪರ್ಕ ಹೊಂದಿ ಜೈವಿಕ ಇಂಧನ ತಯಾರಿಕೆ ಘಟಕ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ನಿರ್ಮಿಸಲು ತಿರ್ಮಾನಿಸಲಾಗಿದೆ.
ಇನ್ನು ಮುಂದೆ ಅಸಕ್ತಿಯಿರುವ ರೈತರು, ಸಂಸ್ಥೆಗಳು ತಮಲ್ಲಿರುವ ಒಣ ಜತ್ರೋಪ್ ಬಿಜಗಳನ್ನು ಮಾರಲು ಹೆಚ್ಚಿನ ಮಾಹಿತಿಗಾಗಿ ಪ್ರೋ. ಜಿ. ಆರ್. ನಾಯಕ, ಸಂಯೋಜಕರು, ಜೈವಿಕ ಇಂಧನ ತಂತ್ರಜ್ಞಾನ ಉದ್ಯಾನವನ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ ಅವರಿಗೆ ಸಂಪರ್ಕಿಸಬಹುದು. ಜೈವಿಕ ಇಂಧನ ಸಸ್ಯಗಳ ಪ್ರಸಿದ್ಧಿ ಪಡೆಸಿ ಅದರಿಂದ ಅದಾಯ ಸೃಷ್ಟಿಸಿ ಗ್ರಾಮಿಣ ಪ್ರದೇಶದಲ್ಲಿ ಹೊಸ ಉದ್ಯೋಗ ಇದೊಂದು ಸುವರ್ಣ ಅವಕಾಶ ಮತ್ತು ಮಹತ್ವದ ಮೈಲುಗಲ್ಲಾಗಿದೆ. ಈ ಕಾರ್ಯಕ್ರಮವು ದಿನಾಂಕ 10 ರಂದು ಬೆಳಿಗ್ಗೆ 10 ಗಂಟೆಗೆ ಹೆದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯಲಯದಲ್ಲಿ ಜರುಗಲಿದೆ.
(ದಟ್ಸ್ ಕನ್ನಡ ವಾರ್ತೆ)
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications