ವೆಬ್ನಲ್ಲಿ ಬಯಲಾದ ನ್ಯಾಯಮೂರ್ತಿಗಳ ಆಸ್ತಿ

ಮಾಹಿತಿ ಹಕ್ಕು ಕಾಯ್ದೆ ಅನ್ವಯ ನೀವು ಮತ್ತು ನಿಮ್ಮ ನ್ಯಾಯಾಲಯದ ನ್ಯಾಯಾಧೀಶರುಗಳು ಆಸ್ತಿ ವಿವರಗಳನ್ನು ಬಹಿರಂಗ ಮಾಡಬೇಕು ಎಂದು ದೆಹಲಿ ಉಚ್ಚ ನ್ಯಾಯಾಲಯ ಕೆಜಿ ಬಾಲಕೃಷ್ಣ ಅವರಿಗೆ ಸೆಪ್ಟೆಂಬರ್ 2, 2009ರಂದು ಸೂಚಿಸಿತ್ತು. ಆ ಪ್ರಕಾರ ಇಂದಿನಿಂದ ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿಗಳ ಆಸ್ತಿ ವಿವರಗಳು ವೆಬ್ ತಾಣದಲ್ಲಿ ಲಭ್ಯವಾದವು.
ಪರಿಸ್ಥಿತಿ ಬದಲಾಗಿರುವುದರ ಹಿನ್ನೆಲೆಯಲ್ಲಿ ನಾವು ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ಕೊಡುತ್ತಿಲ್ಲ, ಆದರೆ, ವಿವರಗಳು ಅಂತರ್ಜಾಲದಲ್ಲಿ ಸಿಗುತ್ತವೆ ಎಂದು ಕೆಜಿ ಬಾಲಕೃಷ್ಣನ್ ಹೇಳಿದರು. ಈ ಮೂಲಕ ನ್ಯಾಯಾಧೀಶರುಗಳ ಸ್ಥಿರಾಸ್ತಿ, ಬಂಡವಾಳ ಹೂಡಿಕೆ ವಿವರಗಳು ಜಗಜ್ಜಾಹೀರಾಗಿವೆ. ನ್ಯಾಯಾಧೀಶರು ತಮ್ಮ ಬಂಧುಬಳಗದ ಹೆಸರಲ್ಲಿ ಮಾಡಿರುವ ಆಸ್ತಿ ವಿವರಗಳನ್ನೂ ಪ್ರಕಟಿಸಲಾಗಿದೆ ಎಂದು ಕೆಜಿಬಿ ಹೇಳಿದ್ದಾರೆ.
ಎರ್ನಾಕುಲಂ ನಲ್ಲಿರುವ ಎರಡು ಮಲಗುವ ಕೋಣೆ ಫ್ಲ್ಯಾಟ್ ಸೇರಿದಂತೆ (ಮೌಲ್ಯ 5.75 ಲಕ್ಷ ರೂ) ಪ್ರಕಟವಾಗಿರುವ ನ್ಯಾ.ಬಾಲಕೃಷ್ಣನ್ ಅವರ ಆಸ್ತಿ ಸುಮಾರು 18 ಲಕ್ಷ ರುಪಾಯಿ. ಅವರಿಗೆ ಫರೀದಾಬಾದ್ ನಲ್ಲಿ ಒಂದು ಖಾಲಿ ಇರುವ ನಿವೇಶನವಿದೆ. ತವರೂರು ಕೇರಳದ ತ್ರಿಕ್ಕಕಾರದಲ್ಲಿರುವ ಮನೆಯ ಮೌಲ್ಯವೂ ಇದರಲ್ಲಿ ಸೇರಿದೆ. ಇದಲ್ಲದೆ, ಕೇರಳದಲ್ಲಿರುವ ಮೂರೂವರೆ, ನಾಕೂವರೆ ಲಕ್ಷ ಬೆಲೆಹಾಳುವ ನಿವೇಶನಗಳ ವಿವರ ಮತ್ತು ಅವರ ಹೆಂಡತಿ ಬಳಿಯಿರುವ 20 ಸಾವರಿನ್ ಬಂಗಾರ ಹಾಗೂ 2000 ಇಸವಿ ಮಾಡೆಲ್ಲಿನ ಒಂದು ಹಳೆ ಸ್ಯಾನ್ ಟ್ರೋ ಕಾರಿನ ಮಾರುಕಟ್ಟೆ ಬೆಲೆಯನ್ನು ನ್ಯಾ.ಬಾಲಕೃಷ್ಣನ್ ವೆಬ್ ನಲ್ಲಿ ಬಿಡಿಬಿಡಿಸಿ ಇಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications