Get Updates
Get notified of breaking news, exclusive insights, and must-see stories!

ಪ್ರವಾಹ ಪರಿಹಾರಕ್ಕೆ ಹರಿದು ಬಂದ ನೌಕರರ ಹಣ

Transport minister R Ashok
ಬೆಂಗಳೂರು, ಅ. 3 : ಉತ್ತರ ಕರ್ನಾಟಕದಲ್ಲುಂಟಾದ ಜಲಪ್ರಳಯದಿಂದ ಜನರಿಗೆ, ಆಸ್ತಿಪಾಸ್ತಿಗೆ ಆಗಿರುವ ನಷ್ಟ ಊಹಾತೀತ. ರಾಜ್ಯ ಸರಕಾರ ಪ್ರಕಟಿಸಿರುವ ಪರಿಹಾರ ಹಣ ಕುಂಭಕರ್ಣನ ಹೊಟ್ಟೆಗೆ ಸುರಿದ ಅರೆಕಾಸಿನ ಮಜ್ಜಿಗೆಯಂತಾಗಿದೆ. ಇಂಥ ಸಂಕಷ್ಟಮಯ ಸಮಯದಲ್ಲಿ ನೆರೆ ಸಂತ್ರಸ್ತರ ಸಹಾಯಕ್ಕೆ ರಾಜ್ಯ ಸರಕಾರಿ ನೌಕರರು, ರಾಜ್ಯದ ಶಾಸಕರು, ಸಂಸದರು, ರಸ್ತೆ ಸಾರಿಗೆ ಇಲಾಖೆ ಒಗ್ಗಟ್ಟಿನಿಂದ ಸಹಾಯಹಸ್ತ ಚಾಚಿವೆ.

ಸರಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದಾನ ಮಾಡಲು ನಿರ್ಧರಿಸಿದ್ದಾರೆ. ಇದರಿಂದಾಗಿ 32 ಕೋಟಿ ರು. ಹಣ ಪರಿಹಾರ ನಿಧಿಗೆ ಜಮಾ ಆಗಲಿದೆ. ರಾಜ್ಯದ ಸಂಸದರು ಮತ್ತು ಸಚಿವರು ಕೂಡ ಒಂದು ತಿಂಗಳ ವೇತನವನ್ನು ಪರಿಹಾರ ನಿಧಿಗೆ ನೀಡಲಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ 50 ಲಕ್ಷ ರು. ಪರಿಹಾರ ನಿಧಿಗೆ ಸಂದಾಯವಾಗಲಿದೆ ಎಂದು ಸಾರಿಗೆ ಸಚಿವ ಆರ್ ಅಶೋಕ್ ಘೋಷಿಸಿದ್ದಾರೆ. ಜನತಾದಳ (ಜಾತ್ಯತೀತ) ನಾಯಕ ಕುಮಾರಸ್ವಾಮಿ ಪಕ್ಷಭೇದ ಮರೆತು ರಾಜ್ಯ ಸರಕಾರ ಕೈಗೊಳ್ಳುವ ಪರಿಹಾರ ಕಾರ್ಯದಲ್ಲಿ ಸಹಕಾರ ನೀಡುವುದಾಗಿ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+