ನಾವು ಸರ್ವಜ್ಞರಲ್ಲ, ಭಟ್ಟಂಗಿತನ ಗೊತ್ತಿಲ್ಲ : ರವಿ

CT Ravi
ಬೆಂಗಳೂರು, ಅ. 1 : ಹುಟ್ಟುತ್ತಲೇ ಎಲ್ಲವನ್ನೂ ತಿಳಿದು ಬಂದಿದ್ದೇವೆ ಅಥವಾ ಸರ್ವಜ್ಞರು ಎನ್ನುವ ಅಹಂಕಾರ ನಮಗಿಲ್ಲ. ಅನುಭವಿಗಳಿಂದ ಪಾಠ ಕಲಿತು ರಾಜ್ಯಕ್ಕೆ ಒಳ್ಳೆದು ಮಾಡಬೇಕೆನ್ನುವ ಅಭಿಲಾಷೆ ನಮ್ಮದು. ಪ್ರತಿಪಕ್ಷಗಳ ಟೀಕೆಯ ಹಿಂದೆ ರಾಜಕೀಯ ದುರುದ್ದೇಶಗಳಿವೆ. ಬೌದ್ದಿಕ ದಿವಾಳಿತನದಿಂದ ನರಳುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಹುಚ್ಚಾಸ್ಪತ್ರೆ ರೋಗಿಗಳಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಸಿ ಟಿ ರವಿ ಕಿಡಿಕಾರಿದ್ದಾರೆ.

ಕಾಂಗ್ರೆಸ್ ನವರಿಗೆ ಸೋನಿಯಾ ಭಜನೆ, ಜೆಡಿಎಸ್ ನಾಯಕರಿಗೆ ದೇವೇಗೌಡ ಮತ್ತು ಕುಟುಂಬದ ಭಟ್ಟಂಗಿತನ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಅದಕ್ಕೆ ವ್ಯತಿರಿಕ್ತವಾಗಿ ನಾವು ಅಭಿವೃದ್ದಿಯ ಭಜನೆ ಮಾಡುತ್ತಿದ್ದೇವೆ. ಆರ್ ಎಸ್ ಎಸ್ ನಮ್ಮ ಮಾತೃ ಸಂಸ್ಥೆ. ಮಾರ್ಗದರ್ಶನದ ಅಗತ್ಯವಿದ್ದಾಗ ತಾಯಿ ಬಳಿಹೋಗುತ್ತೇವೆ. ಮಲತಾಯಿ ಮಕ್ಕಳು ಇದಕ್ಕೆ ಯಾಕೆ ಸಂಕಟ ಪಡುತ್ತಿದ್ದಾರೋ ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಪರಿಣಾಮಕಾರಿ ಕಾರ್ಯನಿರ್ವಹಣೆ ಮತ್ತು ಕಾಲಮಿತಿಯಲ್ಲಿ ಯೋಜನೆಗಳ ಅನುಷ್ಠಾನದಿಂದ ರಾಜ್ಯವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಲು ಸುತ್ತೂರು ಮಠದಲ್ಲಿ ಸಚಿವ ಸಂಪುಟ ಸದಸ್ಯರಿಗೆ ವಿಶೇಷ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಅದನ್ನು ಟೀಕಿಸುವ ಮೂಲಕ ಪ್ರತಿಪಕ್ಷ ನಾಯಕರು ತಮ್ಮ ಅಜ್ಞಾನ ಪ್ರದರ್ಶಿಸಿದ್ದಾರೆ ಎಂದು ರವಿ ತರಾಟೆಗೆ ತೆಗೆದುಕೊಂಡಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+