Get Updates
Get notified of breaking news, exclusive insights, and must-see stories!

ವೈದ್ಯರು, ಉಪನ್ಯಾಸಕರಿಗೆ ದಸರಾ ಬಂಪರ್

VS Acharya
ಬೆಂಗಳೂರು, ಸೆ. 26 : ಕಾಲೇಜು ಉಪನ್ಯಾಸಕರು ಮತ್ತು ವೈದ್ಯರಿಗೆ ರಾಜ್ಯ ಸರಕಾರ ವಿಜಯದಶಮಿ ಹಬ್ಬದ ಉಡುಗೊರೆ ನೀಡಿದೆ. ಉಪನ್ಯಾಸಕರಿಗೆ ಯುಜಿಸಿ ವೇತನ ಸೌಲಭ್ಯ ಜಾರಿಗೊಳಿಸಿದ್ದರೆ, ಗುತ್ತಿಗೆ ವೈದ್ಯರ ಸೇವೆ ಕಾಯಂ ಹಾಗೂ ಕೆಲ ಭತ್ಯೆ ಪರಿಷ್ಕರಿಸುವ ಮಹತ್ವದ ನಿರ್ಣಯಗಳನ್ನು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.

ವಿಶ್ವವಿದ್ಯಾಲಯ, ಸರಕಾರಿ ಕಾಲೇಜು ಮತ್ತು ಖಾಸಗಿ ಅನುದಾನಿತ ಕಾಲೇಜುಗಳ ಒಟ್ಟು 11,500 ಮಂದಿ ಬೋಧಕರು ಇದರ ಲಾಭ ಪಡೆಯಲಿದ್ದಾರೆ. ಪರಿಷ್ಕೃತ ಯುಜಿಸಿ ವೇತನ ಶ್ರೇಣಿಯನ್ನು ಅನುಮೋದಿಸಿ ಜಾರಿಗೊಳಿಸಲಾಗುತ್ತಿದೆ. ಯುಜಿಸಿ ವೇತನ ಶ್ರೇಣಿಗೆ ಸಮನಾಗಿ ಇತರೆ ಭತ್ಯೆಗಳ ಹೆಚ್ಚಳದ ಬಗ್ಗೆ ಪ್ರತ್ಯೇಕ ನಿರ್ಧಾರ ಕೈಗೊಂಡಿದ್ದು, ರಾಜ್ಯ ಸರಕಾರ ನಿಗದಿಗೊಳಿಸಿರುವಂತೆ ನೀಡಲಾಗುವುದು. ಈ ತೀರ್ಮಾನದಿಂದ ಹೆಚ್ಚುವರಿಯಾಗಿ 954 ಕೋಟಿ ರುಪಾಯಿಗಳನ್ನು ನೀಡಿದಂತಾಗುತ್ತದೆ. ಇದರಲ್ಲಿ ಶೇ. 80ರಷ್ಟು ಅಂದರೆ 763 ಕೋಟಿ ರುಪಾಯಿಗಳನ್ನು ಕೇಂದ್ರ ಮತ್ತು 191 ಕೋಟಿ ರುಪಾಯಿಗಳನ್ನು ರಾಜ್ಯ ಸರಕಾರ ಭರಿಸಲಿದೆ ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.

ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ 462 ವೈದ್ಯ ಮತ್ತು 107 ದಂತ ವೈದ್ಯರ ಸೇನೆ ಕಾಯಂಗೊಳಿಸಲಾಗಿದೆ. ಎಂಟು ತಿಂಗಳ ಹಿಂದೆ ನೀಡಿದ್ದ ಭರವಸೆಗಳ ಪೈಕಿ ಕೆಲವನ್ನು ಈಡೇರಿಸಿ ಭತ್ಯೆಗಳ ಪರಿಷ್ಕರಣೆ ಮಾಡಲಾಗಿದೆ. ಸ್ವಂತ ವೆಚ್ಚದಲ್ಲಿ ಸ್ನಾತಕೋತ್ತರ ಪದವಿ ಪಡೆದ ವೈದ್ಯರಿಗೆ 8 ಸಾವಿರ ರುಪಾಯಿ, ಸ್ನಾತಕೋತ್ತರ ಡಿಪ್ಲೋಮಾ ಪಡೆದವರಿಗೆ 5 ಸಾವಿರ, ಸರಕಾರಿ ವೆಚ್ಚದಲ್ಲಿ ಸ್ನಾತಕೋತ್ತರ ಪಡೆದವರಿಗೆ 5 ಸಾವಿರ ಮತ್ತು ಸ್ನಾತಕೋತ್ತರ ಡಿಪ್ಲೋಮಾ ಪಡೆದವರಿಗೆ 3 ಸಾವಿರ ರುಪಾಯಿ ಭತ್ಯೆ, ಗ್ರಾಮಾಂತರ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ 6 ಸಾವಿರ ರುಪಾಯಿ ನೀಡಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+