ನೇತಾಜಿ ಕುಟುಂಬ ಕಥೆ ;ಹೆಗಡೆ ಸುಳ್ಳಿನ ಕಂತೆ

ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮಾಡಬೇಕಾದ ಕೆಲಸ ಬೆಟ್ಟದಷ್ಟು ಇರುವಾಗ, ಪತ್ತೇದಾರಿ ಕೆಲಸಕ್ಕೆ ಅನಂತಕುಮಾರ್ ಹೆಗಡೆ ಯಾಕೆ ಕೈಹಾಕಿದರೋ ಗೊತ್ತಾಗುತ್ತಿಲ್ಲ. ಅದೂ ಇಷ್ಟು ಬಾಲಿಶವಾಗಿ. ಸಂಸದರೊಬ್ಬರು ಇಂಥ ಕಾರ್ಯಕ್ಕೆ ಮುಂದಾ ಗುವುದು ತಪ್ಪಾಗಲಾರದು. ಪೂರ್ವಾಪರ ಯೋಚಿ ಸದೆ ಮುಂದಡಿ ಇಟ್ಟರೆ ನಗುವವರ ಮುಂದೆ ಜಾರಿ ಬಿದ್ದಂತಾಗುತ್ತದೆ. ಹೆಗಡೆ ಕತೆಯೂ ಈಗ ಹೀಗೇ ಆಗಿದೆ. ಹೆಗಡೆ ಈ ಸಾಹಸ'ಕ್ಕೆ ಅಣಿಯಾಗುವ ಮುನ್ನ ಬೆಂಗಳೂರಿನ ರಾಜರಾಜೇಶ್ವರಿನಗರಕ್ಕೆ ಒಮ್ಮೆ ಭೇಟಿ ನೀಡಿದ್ದರೂ ಶ್ರಮ ತಪ್ಪುತ್ತಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಂಪರ್ಕಿಸಿದ್ದರೂ ಸಾಕಿತ್ತು. ಇದಾವುದನ್ನೂ ಮಾಡದೆ, ತಾವೇ ತೋಡಿಕೊಂಡ ಗುಂಡಿಯೊಳಗೆ ಎಡವಿ ಬಿದ್ದಿದ್ದಾರೆ.
ಅಂದಹಾಗೆ ಬೋಸ್ ಪುತ್ರಿ ಅನಿತಾ ಫಾಫ್ ಕರ್ನಾಟಕಕ್ಕೇ ಬಂದಿದ್ದರು. ಅವರಿಗೆ ಸರಕಾರಿ ಗೌರವವೂ ಸಂದಿದೆ. 2000 ನೇ ಇಸವಿಯಲ್ಲಿ ರಾಜರಾಜೇಶ್ವರಿನಗರದ ಐಡಿಯಲ್ ಹೋಮ್ಸ್ನಲ್ಲಿ ಸುಭಾಷ ಭವನ' ನಿರ್ಮಾಣಕ್ಕೆ ಫಾಫ್ ಅಡಿಗಲ್ಲು ಹಾಕಿದ್ದಾರೆ. ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸಚಿವರಾದ ಧರ್ಮಸಿಂಗ್, ಡಿ.ಬಿ. ಚಂದ್ರೇಗೌಡ, ರಾಣಿ ಸತೀಶ್ ಭಾಗವಹಿಸಿದ್ದರು. ನೇತಾಜಿ ಸುಭಾಷ್ಚಂದ್ರ ಬೋಸ್ ರಿಸರ್ಚ್ ಆಂಡ್ ಮಲ್ಟಿ ಡೆವಲಪ್ಮೆಂಟ್ ಟ್ರಸ್ಟ್' ಈ ಕಾರ್ಯಕ್ರಮ ಆಯೋಜಿಸಿತ್ತು. ಅಂದಿನ ಸಭಾಪತಿ ಡಿ.ಬಿ. ಕಲ್ಮಣಕರ್ ಇದರ ಸಂಸ್ಥಾಪಕ ಅಧ್ಯಕ್ಷರು. ಈ ವಿಚಾರ ಬಹಿರಂಗ ಪಡಿಸಿದವರು ಟ್ರಸ್ಟಿನ ಈಗಿನ ಸಂಘಟನಾ ಕಾರ್ಯದರ್ಶಿ ಎಂ. ರಾಜಕುಮಾರ್. ಇದಕ್ಕೆ ಅವರು ದಾಖಲೆಯನ್ನೂ ಒದಗಿಸಿದ್ದಾರೆ.
ಅದರ ಪ್ರಕಾರ, ಅನಿತಾ ಫಾಫ್ ಇರುವಿಕೆಯನ್ನು 1997ರಲ್ಲೇ ಶೋಧಿಸಲಾಗಿತ್ತು. ಅವರು ಜರ್ಮನಿಯಲ್ಲಿ ವಾಸವಾಗಿರುವುದು ಗೊತ್ತಾದ
ಮೇಲೆ ಡಿ.ಬಿ. ಕಲ್ಮಣಕರ್ ನೇತೃತ್ವದ ನಿಯೋಗ ಅಲ್ಲಿಗೆ ತೆರಳಿತ್ತು. ನಿಯೋಗದಲ್ಲಿ ಈಗಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ
ಇದ್ದರು. ಬೋಸ್ ಪುತ್ರಿ ಹಿಂದೆಯೇ ಇಲ್ಲಿಗೆ ಬಂದಿದ್ದರು ಸಚಿತ್ರ ಸುಭಾಷ' ಬಿಡುಗಡೆ ಮಾಡುತ್ತಿರುವ ಬೋಸ್ ಪುತ್ರಿ ಅನಿತಾ ಫಾಫ್. ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ ಎಂ. ರಾಜಕುಮಾರ್ ಜತೆಗಿದ್ದಾರೆ.
ಸುಭಾಷ ಭವನದ ಶಂಕುಸ್ಥಾಪನೆಗೆ ಬರುವಂತೆ ಆಹ್ವಾನ ಕೊಟ್ಟಿದ್ದರಿಂದ ಫಾಫ್, ಅತ್ಯಂತ ಖುಷಿಯಿಂದ ಆಗಮಿಸಿದ್ದರು. 2000 ನೇ ಇಸವಿಯ ಮಾರ್ಚ್ 17 ರಂದು ಈ ಕಾರ್ಯಕ್ರಮ ಜರುಗಿತ್ತು. ಟ್ರಸ್ಟ್ ಹೊರ ತಂದಿದ್ದ ಸಚಿತ್ರ ಸುಭಾಷ' ಕೃತಿಯನ್ನೂ ಅವರು ಬಿಡುಗಡೆ ಮಾಡಿದ್ದರು. ಅನಿತಾ ಫಾಫ್ ಅವರನ್ನು ರಾಜ್ಯದ ಅತಿಥಿ'ಯೆಂದು ಪರಿಗಣಿಸುವಂತೆ ಅಧಿಕಾರಿಗಳಿಗೆ ಆಗಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೂಚಿಸಿದ್ದರು. ಈ ಬಗ್ಗೆ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಉಪ ಕಾರ್ಯದರ್ಶಿ ಆಗಿದ್ದ ಎನ್. ಪ್ರಕಾಶ್ ಬರೆದ ಪತ್ರವೂ ಇದೆ. ಅದನ್ನು ಸಭಾಪತಿ ಕಲ್ಮಣಕರ್ ಅವರ ಮಾಹಿತಿಗಾಗಿ ಕಳುಹಿಸಿ ಕೊಡಲಾಗಿತ್ತು.
ಚಿತ್ರವೂ ನಕಲಿ
ಅನಂತ್ಕುಮಾರ್ ಹೆಗಡೆ ಹಳಿಯಿಲ್ಲದೇ ರೈಲು ಓಡಿಸಿದ್ದಾರೆ ಎಂಬುದಕ್ಕೆ ಇನ್ನೊಂದು ಮಹತ್ವದ ಸಾಕ್ಷಿ ಅನಿತಾ ಫಾಫ್ ಭಾವಚಿತ್ರ. ಹೆಗಡೆಯ ಅದ್ಭುತ ಆವಿಷ್ಕಾರ'ದಿಂದ ಸಿಕ್ಕಿರುವ ಚಿತ್ರಕ್ಕೂ ಫಾಫ್ ಅವರ ಅಸಲಿ ಫೋಟೋಕ್ಕೂ ಯಾವ ಕೋನದಿಂದಲೂ ಹೊಂದಾಣಿಕೆ ಆಗುವುದಿಲ್ಲ. ರಾಜ್ಯದ ಹಾಲಿ ಮುಖ್ಯಮಂತ್ರಿ, ನೇತಾಜಿ ಸಂಸ್ಥೆಯ ಟ್ರಸ್ಟಿ ಆಗಿರುತ್ತಾರೆ. ಹೀಗಾಗಿ ಯಡಿಯೂರಪ್ಪ ಇದರ ಟ್ರಸ್ಟಿಯೂ ಹೌದು. ಜತೆಗೆ ಕೇಂದ್ರದ ಕಾನೂನು ಸಚಿವ ವೀರಪ್ಪ ಮೊಯ್ಲಿ ಹೆಸರೂ ಸಂಸ್ಥೆಯ ಲೆಟರ್ಹೆಡ್ನಲ್ಲಿ ದಾಖಲಾಗಿದೆ.
(ಸ್ನೇಹಸೇತು : ವಿಜಯಕರ್ನಾಟಕ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications