ನದಿಗೆ ಉರುಳಿದ ಬಸ್ಐವರು ನೀರು ಪಾಲು

ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬಸವಕಲ್ಯಾಣ ತಾಲೂಕಿನ ಮುಚಳಂಬದ ಶರಣಪ್ಪಗುರಣ್ಣ (61),ಗೋರ್ಟಾದ ರಘುನಾಥ ಚಿಮ್ಮಾ (55),ಔರಾದ್ ತಾಲೂಕಿನ ಮದನೂರಿನ ಬಾಲಾಜಿ ಬರ್ಗೆ (25), ಭಾಲ್ಕಿತಾಲೂಕಿನ ಉಚ್ಚಾದ ವಿಶ್ವನಾಥ ಶಂಕರ(40) ಭಾಲ್ಕಿ ಆಸ್ಪತ್ರೆಯಲ್ಲಿಕೊನೆಯುಸಿರೆಳೆದರು. ಬಸವಕಲ್ಯಾಣದಶೇಖ ಖುದ್ದುಸ್ (22) ಜಿಲ್ಲಾಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಸವಕಲ್ಯಾಣದಿಂದ ಭಾಲ್ಕಿಗೆ ಬರುತ್ತಿದ್ದ ಬಸ್ ಸುಮಾರು 25ಅಡಿ ಆಳಕ್ಕೆಉರುಳಿದೆ. ಬಸ್ನಲ್ಲಿ ಸುಮಾರು ೪೫ಪ್ರಯಾಣಿಕರಿದ್ದರು. ಬಸ್ ಉರುಳಿದ ಸ್ಥಳದಲ್ಲಿ ಎರಡುಅಡಿ ನೀರಿದ್ದರಿಂದ ಹೆಚ್ಚಿನ ಜೀವಹಾನಿತಪ್ಪಿದೆ. ಚಾಲಕ ಚಂದ್ರಕಾಂತ, ನಿರ್ವಾಹಕ ಓಂಕಾರ ಸಹ ಗಾಯಾಳುಗಳಲ್ಲಿಸೇರಿದ್ದಾರೆ.
(ಸ್ನೇಹಸೇತು: ವಿಜಯ ಕರ್ನಾಟಕ)












Click it and Unblock the Notifications