ಕರಾಚಿಯಲ್ಲಿ ಕೃಷ್ಣ ವಿಮಾನ ತುರ್ತು ಭೂಸ್ಪರ್ಶ

ಆಂಧ್ರ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಸಾವಿನ ಹಿನ್ನೆಲೆಯಲ್ಲಿ ಕೃಷ್ಣ ಅವರು ಬ್ರೆಜಿಲ್ ಪ್ರವಾಸವನ್ನ್ನು ಮೊಟಕುಗೊಳಿಸಿ ಹಿಂತಿರುಗುತ್ತಿದ್ದರು. ದುಬೈನಿಂದ ದೆಹಲಿಗೆ ವಿಮಾನ ಹೊರಟಿತ್ತು. ಪ್ರತಿಕೂಲ ಹವಾಮಾನದ ಕಾರಣ ವಿಮಾನವನ್ನು ದೆಹಲಿಯಲ್ಲಿ ಭೂಸ್ಪರ್ಶ ಮಾಡಲು ಅನುಮತಿ ದೊರಕಲಿಲ್ಲ.
ಅನಿವಾರ್ಯವಾಗಿ ಕರಾಚಿಯ ಕ್ವಾಯಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಇಂಧನ ತುಂಬಿಸಿಕೊಂಡ ವಿಮಾನ ರಾತ್ರಿ 11.44ರ ಹೊತ್ತಿಗೆ ಮತ್ತೆ ದುಬೈಗೆ ಮರಳಿತು. ವಿಮಾನದಲ್ಲಿ ಕೃಷ್ಣ ಅವರೊಂದಿಗೆ 101 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.
(ಏಜೆನ್ಸೀಸ್)












Click it and Unblock the Notifications