ಕರಾಚಿಯಲ್ಲಿ ಕೃಷ್ಣ ವಿಮಾನ ತುರ್ತು ಭೂಸ್ಪರ್ಶ

Krishna’s plane emergency landing at Karachi airport
ಕರಾಚಿ, ಸೆ.4: ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರಿದ್ದ ಎಮಿರೇಟ್ಸ್ ವಿಮಾನ(EK514) ಪಾಕಿಸ್ತಾನದ ಕರಾಚಿ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ತುರ್ತು ಭೂಸ್ಪರ್ಶ ಮಾಡಿದೆ. ಕೃಷ್ಣ ಅವರು ಬ್ರೆಜಿಲ್ ಪ್ರವಾಸದಿಂದ ದುಬೈ ಮಾರ್ಗವಾಗಿ ಭಾರತಕ್ಕೆ ಹಿಂತಿರುಗುತ್ತಿದ್ದಾಗ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಭೂಸ್ಪರ್ಶ ಮಾಡಿತು ಎಂದು ಮೂಲಗಳು ತಿಳಿಸಿವೆ.

ಆಂಧ್ರ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿ ಅವರ ಸಾವಿನ ಹಿನ್ನೆಲೆಯಲ್ಲಿ ಕೃಷ್ಣ ಅವರು ಬ್ರೆಜಿಲ್ ಪ್ರವಾಸವನ್ನ್ನು ಮೊಟಕುಗೊಳಿಸಿ ಹಿಂತಿರುಗುತ್ತಿದ್ದರು. ದುಬೈನಿಂದ ದೆಹಲಿಗೆ ವಿಮಾನ ಹೊರಟಿತ್ತು. ಪ್ರತಿಕೂಲ ಹವಾಮಾನದ ಕಾರಣ ವಿಮಾನವನ್ನು ದೆಹಲಿಯಲ್ಲಿ ಭೂಸ್ಪರ್ಶ ಮಾಡಲು ಅನುಮತಿ ದೊರಕಲಿಲ್ಲ.

ಅನಿವಾರ್ಯವಾಗಿ ಕರಾಚಿಯ ಕ್ವಾಯಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲಾಯಿತು. ಇಂಧನ ತುಂಬಿಸಿಕೊಂಡ ವಿಮಾನ ರಾತ್ರಿ 11.44ರ ಹೊತ್ತಿಗೆ ಮತ್ತೆ ದುಬೈಗೆ ಮರಳಿತು. ವಿಮಾನದಲ್ಲಿ ಕೃಷ್ಣ ಅವರೊಂದಿಗೆ 101 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+