ಆಂಧ್ರ ಸಿಎಂ ಸಾವಿಗೆ ಕಣ್ಣೀರಿಟ್ಟ ಅಮೆರಿಕ
ನವದೆಹಲಿ, ಸೆ.3: ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರ ದುರಂತ ಸಾವಿಗೆ ಭಾರತದಲ್ಲಿನ ಅಮೆರಿಕದ ರಾಯಭಾರಿ ತಿಮೋತಿ ಜೆ ರೋಮರ್ ಅವರು ದುಃಖ ವ್ಯಕ್ತಪಡಿಸಿದ್ದಾರೆ. ವೈಎಸ್ ಆರ್ ಸೇರಿದಂತೆ ನಾಲ್ವರು ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವುದನ್ನು ಸರ್ಕಾರ ದೃಢಪಡಿಸಿದೆ.
ಭಾರತ ಹಾಗೂ ಅಮೆರಿಕ ಬಾಂಧವ್ಯಕ್ಕೆ ಕೊಂಡಿಯಾಗಿದ್ದ ಆಂಧ್ರ ಸಿಎಂ ಅವರಿಗೆ ಉತ್ತಮ ಆರ್ಥಿಕ ನೋಟವಿತ್ತು. ಬಡವರಿಗೆ ನೆರವಾಗಲು ಅವರ ವೈದ್ಯ ವೃತ್ತಿಯ ಮನಸ್ಸು ಸದಾ ಮಿಡಿಯುತ್ತಿತ್ತು .ಅಮೆರಿಕ ಮಹಾಸಂಸ್ಥಾನದ ಪರವಾಗಿ ಆಂಧ್ರ ಸಿಎಂ ಹಾಗೂ ಅವರ ಜತೆ ಸಾವನ್ನಪ್ಪಿದ ನಾಲ್ವರಿಗೆ ಅಂತಿಮ ನಮನವನ್ನು ಸಲ್ಲಿಸಲಾಗುವುದು . ಈ ಅಕಾಲಿಕ ಮರಣದ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಎಂದು ರೋಮರ್ ಹೇಳಿದ್ದಾರೆ.
(ಏಜೆನ್ಸೀಸ್)












Click it and Unblock the Notifications