ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿ ಮೇಲೆ ಪ್ರಣಬ್ ಮುಖರ್ಜಿ ಬಾಂಬ್
ಪಾಕಿಸ್ತಾನಕ್ಕೆ ಹೋದ ಬಳಿಕ ಮೊಹಮ್ಮದ್ ಆಲಿ ಜಿನ್ನಾ ಒಬ್ಬ ಜಾತ್ಯಾತೀತವಾದಿ ಎನ್ನುವುದನ್ನು ಆಡ್ವಾಣಿ ಪತ್ತೆ ಹಚ್ಚಿದರು. ಜಸ್ವಂತ್ ಸಿಂಗ್ ಗೆ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ದೇಶ ವಿಭಜನೆಗೆ ಜಿನ್ನಾ ಕಾರಣರಲ್ಲ ಎಂದು ಹೇಳುತ್ತಿದ್ದಾರೆ. ಇತಿಹಾಸವನ್ನು ತಿರುಚಿ ಪ್ರಶಂಸೆಗೆ ಅರ್ಹನಲ್ಲದ ವ್ಯಕ್ತಿಯೊಬ್ಬನನ್ನು ಹೊಗಳುತ್ತಿರುವ ಬಿಜೆಪಿ ನಾಯಕರು ಇದರ ಹಿಂದಿನ ಕಾರಣವನ್ನು ಜನರಿಗೆ ವಿವರಿಸಬೇಕೆಂದು ಒತ್ತಾಯಿಸಿದ್ದಾರೆ. ಜಸ್ವಂತ್ ಪುಸ್ತಕದ ಬಗ್ಗೆ ಆಡಳಿತ ಕಾಂಗ್ರೆಸ್ ಪಕ್ಷದ ಮೊದಲ ಉನ್ನತ ಮಟ್ಟದ ಪ್ರತಿಕ್ರಿಯ ಇದಾಗಿದೆ.
ಬಿಜೆಪಿ ಹಿರಿಯ ನಾಯಕರಾಗಿದ್ದ ಜಸ್ವಂತ್ ಸಿಂಗ್ ಜಿನ್ನಾ ಇಂಡಿಯಾ ಪಾರ್ಟಿಶನ್ ಇಂಡಿಪೆಂಡೆನ್ಸ್ ಎಂಬ ಪುಸ್ತಕ ಬರೆದು ಪಾಕಿಸ್ತಾನದ ಪಿತಾಮಹ ಮೊಹ್ಮದ್ ಅಲಿ ಜಿನ್ನಾ ಅವರನ್ನು ಪ್ರಶಂಸಿಸಿದ್ದರು. ಇದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದು, ಜಸ್ವಿಂತ್ ಸಿಂಗ್ ಅವರನ್ನು ಇದೇ ಕಾರಣಕ್ಕೆ ಪಕ್ಷದಿಂದ ಉಚ್ಚಾಟಿಸಲಾಗಿದೆ.
(ಏಜನ್ಸೀಸ್)
Comments
bjp ಪ್ರಣಬ್ ಮುಖರ್ಜಿ lk advani pranab mukherjee ಅಡ್ವಾಣಿ jaswant singh jawaharlal nehru ಜವಾಹರ್ ಲಾಲ್ ನೆಹರು ಜಿನ್ನಾ sardar patel ಸರ್ದಾರ್ ಪಟೇಲ್
Story first published: Thursday, August 27, 2009, 14:38 [IST]