ಮಂಗಳೂರು ಬೆಂಗಳೂರು ರೈಲು ಸಿದ್ಧ
ಮಂಗಳೂರು ಆ. 25: ದಕ್ಷಿಣ ಕರ್ನಾಟಕದ ಕೇಂದ್ರ ಸ್ಥಳ ಮಂಗಳೂರು ಮತ್ತು ರಾಜಧಾನಿ ನಡುವೆ ಸಂಚರಿಸುವ ಪ್ರಯಾಣಿಕರ ಬಹುದಿನಗಳ ಕನಸು ಈಡೇರುವ ಗಳಿಗೆ ಸಮೀಪಿಸುತ್ತಿದೆ. ರೈಲ್ವೆ ಇಲಾಖೆ ಮಂಗಳೂರು ಬೆಂಗಳೂರು ನಡುವಿನ ಹಗಲು ರೈಲ್ವೆ ಸಂಚಾರಕ್ಕೆ ಹಸುರು ನಿಶಾನೆ ತೋರಿಸಿದ್ದು ಆಗಸ್ಟ್ 29ರಂದು ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಹೊಸ ರೈಲಿಗೆ ಚಾಲನೆ ದೊರೆಯಲಿದೆ.
ಆರಂಭದಲ್ಲಿ ರೈಲು ವಾರಕ್ಕೆ ಮೂರು ಬಾರಿ ಸಂಚರಿಸಲಿದೆ. ಕೇಂದ್ರ ಸಚಿವ ಕೆ ಎಚ್ ಮುನಿಯಪ್ಪ ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಸಚಿವ ಆಸ್ಕಾರ್ ಫರ್ನಾ೦ಡಿಸ್ ಮತ್ತಿತರರು ಸಂಚಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಈ ರೈಲನ್ನು ಕುಂದಾಪುರದವರೆಗೆ ವಿಸ್ತರಿಸುವ ಯೋಜನೆ ರೈಲ್ವೆ ಇಲಾಖೆ ಮುಂದಿದೆ ಎಂದು ರೈಲ್ವೆ ಅಭಿವೃದ್ದಿ ಹೋರಾಟ ಸಮಿತಿಯ ಪಿ ವಿ ಮೋಹನ್ ತಿಳಿಸಿದ್ದಾರೆ. ರೈಲು ಓಡಾಡುವ ದಿನಗಳು, ಸಮಯ, ರೈಲು ಸಂಖ್ಯೆ ಮುಂತಾದ ವಿವರಗಳು ಉದ್ಘಾಟನೆಯ ನಂತರ ಹೊರಬೀಳಲಿದೆ. ನಿರೀಕ್ಷಿಸಿ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications