ಸಮಾಜ ಕಲ್ಯಾಣ ಸಚಿವ ಸುಧಾಕರ್ ರಾಜೀನಾಮೆ?

ಈ ಸಂಬಂಧ ಸುಧಾಕರ್ ಮೇಲೆ ಒತ್ತಡ ಹಾಕಲಾಗಿದ್ದು, ಅವರು ಸಚಿವರಾಗುವ ಮೊದಲೇ ತ್ರಿಶೂಲ್ ಎಂಟರ್ ಪ್ರೈಸಸ್ ಮತ್ತು ಸೆವೆನ್ ಹಿಲ್ಸ್ ಪ್ರಾಪರ್ಟಿಸ್ ಸಂಸ್ಥೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸಿ, ಮೈಸೂರು ಬ್ಯಾಂಕಿನ ಗಾಂಧಿನಗರ ಶಾಖೆಯನ್ನು ವಂಚಿಸಿರುವ ಆರೋಪವಿದೆ. ಬಹಳ ಇಕ್ಕಿಟ್ಟಿಗೆ ಸಿಲುಕಿರುವ ಸುಧಾಕರ್ ರಾಜೀನಾಮೆ ನೀಡುವುದು ಅನಿವಾರ್ಯವಾಗಿದೆ.
ಸೆಫ್ಟೆಂಬರ್ 9ರಂದು ಮೂರು ದಿನಗಳ ಕಾಲ ವಿಧಾನಮಂಡಲ ವಿಶೇಷ ಅಧಿವೇಶನದ ನಡೆಯಲಿದೆ. ಅದಕ್ಕೂ ಮುನ್ನವೇ ಸುಧಾಕರ್ ಅವರಿಂದ ರಾಜೀನಾಮೆ ಪಡೆದು, ಅವರ ಜಾಗಕ್ಕೆ ಹೊಸಬರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications