ಕುಡಿಯುವ ನೀರು ಕೂಡಲೇ ಪೂರೈಸಿ:ಶೋಭಾ

Shobha Karandlaje
ಬೆಂಗಳೂರು, ಆ.22: ಬರಗಾಲದ ಸದ್ಯದ ಪರಿಸ್ಥಿತಿಯ ತೀವ್ರತೆಯನ್ನು ಮನಗಂಡು ತತ್‌ಕ್ಷಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೊರೆಯಲಾದ ಎಲ್ಲಾ ಕೊಳವೆ ಬಾವಿಗಳಿಗೆ ಪಂಪ್ ಹಾಕಿಸಿ, ವಿದ್ಯುದೀಕರಣ ಸಂಪರ್ಕ ಒದಗಿಸಿ ಜನತೆಗೆ ಕುಡಿಯುವ ನೀರನ್ನು ಪ್ರಥಮಾಧ್ಯತೆಯ ಮೇಲೆ ಒದಗಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರ ಶೋಭಾ ಕರಂದ್ಲಾಜೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರದ ಭರವಸೆಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಎಲ್ಲ ಇಲಾಖೆಗಳೂ ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

ಕೇವಲ ಕ್ರಿಯಾ ಯೋಜನೆಗೆ ಅಂಟಿಕೊಳ್ಳದೇ ತತ್‌ಕ್ಷಣದ ಅಗತ್ಯಗಳಿಗೆ ಸ್ವಂದಿಸಿ ಕೆರೆಗಳ ಹೂಳೆತ್ತುವಿಕೆ, ರಿಪೇರಿ ಕೆಲಸಗಳಿಂದ ಹಿಡಿದು ತೋಟಗಾರಿಕೆ, ಸಾಮಾಜಿಕ ಅರಣ್ಯ ಜಲಾನಯನ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸ್ವಚ್ಚತಾ ಆಂದೋಲನ ಸುವರ್ಣಗ್ರಾಮ ಮುಂತಾದ ಪ್ರತಿಯೊಂದು ಜನಪರ ಯೋಜನೆಗಳಿಗೂ ಈ ಹಣವನ್ನು ಜನಶಕ್ತಿಯನ್ನು ಬಳಸಿಕೊಳ್ಳಬೇಕೆಂದು ಒತ್ತಿ ಹೇಳಿದರು.

ಕೇಂದ್ರ ಸರ್ಕಾರ ಬೇರೆ ರಾಜ್ಯಗಳಿಗಿಂತ 810 ಕೋಟಿ ರೂ.ಗಳನ್ನು ನಮ್ಮ ರಾಜ್ಯಕ್ಕೆ ಈ ಯೋಜನೆಯಡಿ ಹೆಚ್ಚುವರಿಯಾಗಿ ನೀಡಿದೆ. ಕೂಲಿಗಳು-ಕೆಲಸಗಾರರು ದೊರೆಯುವುದು ಕಷ್ಟವಾದ ಸಂದರ್ಭದಲ್ಲಿ ಈಗಿರುವ ನಿಯಮವನ್ನು ಕೊಂಚ ಸಡಿಲಿಸಿಕೊಳ್ಳಬಹುದು.ಒಂದು ಕುಟುಂಬವನ್ನು ವಿಭಜಿಸಿ ಎರಡು ಕುಟುಂಬ ಎಂದು ತೋರಿಸಿ ಕೆಲಸ ಮಾಡಿದರೆ ನಾಡಿನ ಸಂಪನ್ಮೂಲವೃದ್ಧಿಸಬಹುದೆಂಬ ಆಶಾಭಾವ ವ್ಯಕ್ತಪಡಿಸಿದರು.

ಗ್ರಾಮೀಣ ಜನತೆಯ ಪ್ರತಿಯೊಂದು ಸಮಸ್ಯೆಗಳಿಗೂ ಗ್ರಾಮಪಂಚಾಯತಿ ತಾಲ್ಲೂಕು ಅಧಿಕರಿಗಳ ಮಟ್ಟದಲ್ಲೇ ಪರಿಹಾರವಾಗಬೇಕು, ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು, ವಿಳಂಬಗತಿಯ ಅಭಿವೃದ್ಧಿ ಕಾಮಗಾರಿಗಳ ನಷ್ಟಕ್ಕೆ ಅಧಿಕಾರಿಗಳ ವೇತನದಿಂದ ಕಡಿತಗೊಳಿಸಿ, ಚುರುಕು ಮುಟ್ಟಿಸಲಾಗುವುದು ಎಂದು ಕಠಿಣವಾಗಿ ನುಡಿದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+