ಉಪಚುನಾವಣೆ : ಆ.21ರಂದು ಫಲಿತಾ೦ಶ

ಬೆಂಗಳೂರು, ಆ. 20 : ಆಗಸ್ಟ್ 18 ರಂದು ನಡೆದ ಉಪಚುನಾವಣೆಯ ಫಲಿತಾ೦ಶ ನಾಳೆ (ಆ 21) ಮಧ್ಯಾಹ್ನದೊಳಗೆ ಹೊರಬೀಳಲಿದೆ. ಆಖಾಡದಲ್ಲಿರುವ 71 ಅಭ್ಯರ್ಥಿಗಳ ಹಣೆಬರಹ ವಿದ್ಯುನ್ಮಾನ ಮತಯಂತ್ರದಲ್ಲಿ ಭದ್ರವಾಗಿ ಕುಳಿತಿದ್ದು, ಮತದಾರ ಪ್ರಭು ಯಾರ ಕಡೆ ಒಲವಿಟ್ಟಿದ್ದಾನೆನ್ನುವುದು ಕುತೂಹಲದ ವಿಷಯ.

ಚಿತ್ತಾಪುರ, ಚನ್ನಪಟ್ಟಣ, ರಾಮನಗರ ಮತ್ತು ಕೊಳ್ಳೇಗಾಲ ಕ್ಷೇತ್ರದಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದ್ದರೆ, ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ. ಮತ ಎಣಿಕೆ ಪ್ರಕ್ರಿಯೆ ನಾಳೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮತ ಎಣಿಕೆ ನಡೆಯುವ ಕೇಂದ್ರಗಳು ಈ ರೀತಿಯಿವೆ.

* ಚಿತ್ತಾಪುರ - ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣ.
* ಚನ್ನಪಟ್ಟಣ - ಗೌಸಿಯಾ ಇಂಜಿನಿಯರಿಂಗ್ ಕಾಲೇಜ್, ರಾಮನಗರ
* ರಾಮನಗರ - ಗೌಸಿಯಾ ಇಂಜಿನಿಯರಿಂಗ್ ಕಾಲೇಜ್, ರಾಮನಗರ
* ಕೊಳ್ಳೇಗಾಲ - ಮಹದೇಶ್ವರ ಕಾಲೇಜ್
* ಗೋವಿಂದರಾಜನಗರ - ಅಂಬೇಡ್ಕರ್ ಮೈದಾನ, ಬಸವೇಶ್ವರ ನಗರ, ಬೆಂಗಳೂರು

ಚುನಾವಣೆ ಫಲಿತಾಂಶದ ಕ್ಷಣಕ್ಷಣದ ಸುದ್ದಿಯನ್ನು ದಟ್ಸ್ ಕನ್ನಡ ಬಿತ್ತರಿಸಲಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+