ಪ್ರಿಯಕೃಷ್ಣ ಕೈ ಹಿಡಿದ ತೆನೆಹೊತ್ತ ಮಹಿಳೆ

ಆಪರೇಷನ್ ಕಮಲಕ್ಕೆ ಒಳಗಾಗುವವರ ಮನೆಗೆ ಮೊದಲು ಲಕ್ಷ್ಮಿ ಹೋಗುತ್ತದೆ ನಂತರ ರಾಜಲಕ್ಷ್ಮಿ . ಇಂತಹ ನೀಚ ರಾಜಕಾರಣವನ್ನು ನನ್ನ ವೃತ್ತಿ ಜೀವನದಲ್ಲೇ ನೋಡಿಲ್ಲ. ನನಗೆ ದೇವೇಗೌಡರ ಆಶೀರ್ವಾದವಿದೆ ಎಂದು ಸೋಮಣ್ಣ ಸುಳ್ಳು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಅವರನ್ನು ಬೆಂಬಲಿಸುವ ಮಾತೇ ಇಲ್ಲ. ನಮ್ಮದು ಜಾತ್ಯತೀತ ಧೋರಣೆಯ ಪಕ್ಷ. ಹಾಗಾಗಿ ಜಾತ್ಯತೀತ ಪಕ್ಷವನ್ನು ಮಾತ್ರ ಬೆಂಬಲಿಸುತ್ತೇವೆಯೇ ಹೊರತು ಕೋಮುವಾದಿ ಪಕ್ಷವನ್ನಲ್ಲ ಎಂದು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿಕೆ ನೀಡಿದ್ದಾರೆ.
ಭಾರಿ ಅಭಿವೃದ್ದಿ ಕೆಲಸ ಮಾಡಿದ್ದೇವೆಂದು ಸುಳ್ಳು ಹೇಳುತ್ತಿರುವ ಸೋಮಣ್ಣ ರಸ್ತೆಗಳಿಗೆ ಡಾಂಬರು ಹಾಕಿಸಿರುವುದನ್ನು ಬಿಟ್ಟರೆ ಬೇರೇನೂ ಅಭಿವೃದ್ದಿ ಕೆಲಸ ಮಾಡಿಲ್ಲ, ನಮ್ಮೆಲ್ಲಾ ಕಾರ್ಯಕರ್ತರು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ಹೇಳಿದ್ದಾರೆ. ಅಭಿವೃದ್ಧಿಯ ಹೆಸರಿನಲ್ಲಿ ಜನರಿಗೆ ಮೋಸ ಮಾಡುವ ಪಕ್ಷವನ್ನು ನಾವು ಬೆಂಬಲಿಸುವುದಿಲ್ಲ ಎಂದು ದೇವೇಗೌಡ ಅವರ ಕರೆಗೆ ಪೂರಕವಾದ ಮಾತುಗಳನ್ನು ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಆಡಿದ್ದಾರೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications