ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉಪಚುನಾವಣೆ ಪ್ರಚಾರ ಆಖಾಡಕ್ಕೆ ಕೃಷ್ಣ
ಎಲ್ಲಾ ಐದು ಕ್ಷೇತ್ರಗಳಲ್ಲಿ ಸಂಚರಿಸಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಕೃಷ್ಣ ಪ್ರಚಾರಕ್ಕೆ ಇಳಿಯುತ್ತಿರುವುದರಿಂದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಉಂಟಾಗಿದೆ. ಹೊಸ ಹುರುಪಿನಿಂದ ಕಾರ್ಯಕರ್ತರು ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಬಿಜೆಪಿ ಪಕ್ಷದ ಬಿಕ್ಕಟ್ಟು ಮತ್ತು ಭಿನ್ನಾಭಿಪ್ರಾಯ ದಿನೇದಿನೇ ಹೆಚ್ಚುತ್ತಿರುವುದು ಪಕ್ಷಕ್ಕೆ ವರವಾಗಿ ಪರಿಣಮಿಸಲಿದೆ. ಪ್ರಭಾವಿ ನಾಯಕ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮ ಸೃಸ್ಟಿಸಿ ದೇಶದ ನಂಬರ್ 1 ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರವಾಗಿರುವ ಎಸ್ ಎಂ ಕೃಷ್ಣ ಪ್ರಚಾರಕ್ಕೆ ಆಗಮಿಸುತ್ತಿರುವುದು ಹೊಸ ದಿಕ್ಸೂಚಿಗೆ ಕಾರಣವಾಗಲಿದೆ ಎಂದು ಪಕ್ಷದ ಸದಸ್ಯರೊಬ್ಬರು ಹೇಳಿಕೆ ನೀಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Thursday, August 6, 2009, 13:05 [IST]